Thursday, 27 June 2019

ಭಜನಾಮೃತ

ಹಿಂದೊಂದು ಕಾಲವಿತ್ತು , ಅದು ಹೇಗೆ ಗೊತ್ತೆ , ಪ್ರಾತಃಕಾಲದಲ್ಲಿ ಸೂರ್ಯ ಉದಯಿಸುವುದಕ್ಕೂ ಮುನ್ನ ಎದ್ದ ಮನೆಯ ಹೆಂಗಳೆಯರೆಲ್ಲಾ ಸ್ನಾನಾದಿ ಕಾರ್ಯಗಳನ್ನೆಲ್ಲಾ ಮುಗಿಸಿ , ಮುಂಬಾಗಿಲ ನೆಲವನ್ನು ಸ್ವಾಸ್ಥ್ಯಗೊಳಿಸಿ, ರಂಗೋಲಿ ಹಾಕಿ ದೇವಗೃಹದಲ್ಲಿ ದೇವರ ಸೇವೆಗೈದು ಪ್ರತಿದಿನ ಪ್ರಾರಂಭಿಸುತ್ತಿದ್ದರು ಮನೆಯ ಪುರುಷರೆಲ್ಲಾ ಎದ್ದು ಪ್ರತಿದಿನ ಮನೆಯ ಕಾರ್ಯಗಳನ್ನೆಲ್ಲಾ ತಕ್ಕ ಮಟ್ಟಿಗೆ ಮುಗಿಸಿ, ಸ್ನಾನಾದಿಗಳನ್ನು ಮುಗಿಸಿ ದೇವತಾ ಕಾರ್ಯಕ್ಕೆ ಅಣಿಯಾಗುತ್ತಿದ್ದರು ಆಗ ಇಂದಿನಂತೆ ಮೊಬೈಲುಗಳೇನು ಇರುತ್ತಿರಲಿಲ್ಲ ಬೆಳಗ್ಗೆ ದೇವರನ್ನು ನೆನೆದ ಬಳಿಕವಷ್ಟೇ ದೈನಂದಿನ ಕಾರ್ಯಗಳು ಪ್ರಾರಂಭವಾಗುತ್ತಿದ್ದವು, ಕೂಡುಕುಟುಂಬಗಳಲ್ಲಿ ಇದ್ದಂತಹಾ ಹಿರಿಯ ಜೀವಗಳು ತನ್ನ ಮಕ್ಕಳಿಗೆ ತಿಳಿಸಿ ಕೊಟ್ಟಂತಹಾ ಸತ್ಕಾರ್ಯಗಳನ್ನು ತನ್ನ ಮೊಮ್ಮಕ್ಕಳಿಗೂ ತಿಳಿಸಿಕೊಡುತ್ತಿದ್ದರು , ಬೆಳಗ್ಗೆ ಎದ್ದ ಹಿರಿಯ ಜೀವಗಳು ಮನೆಯ ಮಕ್ಕಳೆಲ್ಲರಿಗೂ ಉತ್ತಮ ರೀತಿಯಲ್ಲಿ ಸತ್ಕಾರ್ಯಗಳನ್ನು ತಿಳಿಸುತ್ತಿದ್ದರು. ವಿಷ್ಣು ಸಹಸ್ರನಾಮ , ಲಲಿತಾ ಸಹಸ್ರನಾಮಗಳಂತಹಾ ದೇವತಾ ಸಹಸ್ರನಾಮಗಳು ಬಾಯಿಪಾಠವಾಗಿ ಬಿಟ್ಟಿರುತ್ತಿತ್ತು.

ಕಾಲ ಕಳೆಯಿತು ಕೂಡು ಕುಟುಂಬಗಳು ಒಡೆದ ಕುಟುಂಬಗಳಾದವು, ನಾವೆಲ್ಲರೂ ಸೂರ್ಯವಂಶಸ್ತರಾಗಿಬಿಟ್ಟೆವು ಅರ್ಥಾತ್ ಸೂರ್ಯ ಉದಯದ ಬಳಿಕ ನಮ್ಮ ದಿನ ಪ್ರಾರಂಭವಾಗತೊಡಗಿತು, ಮನೆಯಲ್ಲಿ ಗಂಟೆಯ ಸದ್ದಿಲ್ಲ ಏನೂ ಇಲ್ಲ.. ಹಿರಿಯ ಜೀವಗಳಿಗೆ ಬೆಲೆಯೂ ಇಲ್ಲದಂತಾಯಿತು.  ದಿನನಿತ್ಯ ಮನೆಮಂದಿಯೆಲ್ಲಾ ಕೂಡಿ ಮಾಡುತ್ತಿದ್ದ ಭಜನೆಗಳು ಶುಕ್ರವಾರಕ್ಕೆ ಸೀಮಿತವಾಯಿತು. ಆದರೆ ಒಂದತೂ ಸತ್ಯ ಈಗ ಕೆಲ ಬುದ್ಧಿಜೀವಿಗಳಿದ್ದಾರೆ ಕೇಳುತ್ತಾರೆ, ನಾವ್ಯಾಕೆ ಭಜನೆ ಮಾಡಬೇಕು?? ಭಜನೆ ಮಾಡುವುದರಿಂದ ಏನು ಪ್ರಯೋಜನ ಎಂದು ಆದರೆ ಪ್ರಯೋಜನ ಖಂಡಿತಾ ಇದೆ, ವೈಜ್ಞಾನಿಕವಾಗಿ ಭಜನೆಯ ಮಹತ್ವವನ್ನು ಉಲ್ಲೇಖಿಸಹೊರಟರೆ ಅದಕ್ಕೆ ಒಂದು ನೂರು ಪುಟಗಳು ಸಾಲಬಹುದೇನೋ...
ಭಜನೆಯ ಸಂದರ್ಭದಲ್ಲಿ ಮನೆಮಂದಿಯೆಲ್ಲಾ ಒಟ್ಟಾಗುವುದರಿಂದ ನಾವೆಲ್ಲಾ ಒಂದೇ ಎಂಬ ಭಾವನೆ ಬಂದು ನಾವೆಲ್ಲಾ ಒಗ್ಗೂಡಿ ಇರುತ್ತೇವೆ ಆದ್ದರಿಂದ ಸಮಾಜದಲ್ಲಿ ಒಡಕಿಗೆ ಆಸ್ಪದವಿರುವುದಿಲ್ಲ
ಭಜನೆಯಿಂದ ನಮ್ಮ ಜ್ಞಾಪಕ ಶಕ್ತಿಯೂ ಹೆಚ್ಚಾಗುತ್ತದೆ,
¨ಪ್ರತಿದಿನ ಭಜನೆ ಮಾಡುವುದರಿಂದ ದೇವರ ನಾಮಜಪದೊಂದಿಗೆ ನಾವು ನಮ್ಮತನವನಗ್ನು ಉಳಿಸುವುದರೊಂದಿಗೆ , ಹೆಣ್ಣನ್ನು ಗೌರವವಾಗಿ ಕಾಣುತ್ತೇವೆ
ಆರೋಗ್ಯದ ಮೇಲೂ ಭಜನೆ ಉತ್ತಮ ವಾತಾವರಣ ಕಲ್ಪಿಸುತ್ತದೆ.
ಆದ್ದರಿಂದ ನಮ್ಮ ಸ್ವಾಸ್ಥ್ಯಕ್ಕಾಗಿ ನಮದಮ ಬದುಕಿಗಾಗಿ ನಾವು ಭಜಿಸೋಣ
ಸಮಾಜದ ಉನ್ನತಿಗೆ ಶ್ರಮಿಸೋಣ
ಜೈ ಹಿಂದ್
ಶ್ರೀ ರಾಮಕೃಷ್ಣಾರ್ಪಣಮಸ್ತು

ಇಂತಿ
ಅಕ್ಷಯ್

No comments:

Post a Comment

ಪ್ರೀತಿ.. ಪ್ರೇಮ... ಮನೊಕಾಮನೆ..... ಒಂದು ಜೋಡಿಯ ಸುತ್ತ...!

ಅನೇಕ ವರ್ಷಗಳ ಕಾಲ ಬರವಣಿಗೆಯಿಂದ ವಿಮುಖನಾಗಿದ್ದೆ ಆದ್ರೆ ಈಗ ಅದ್ಯಾಕೋ ಬರೆಯಬೇಕು ಅನ್ನಿಸಿತ್ತು ಅದೊಂದು ಕಥೆ... ನನ್ನ ಕಥೆಯಲ್ಲ.. ನಾ ಕೇಳಿದ ಪ್ರೀತಿಯ ಕಥೆ... ...