ದೇವರು ಬರೆದ ಕಥೆಯಲ್ಲಿ ತಾಯಿಯ ಪ್ರೀತಿಯೇ ಮೊದಲಿಲ್ಲಿ... ಹೌದು ತಾಯಿಯ ಪ್ರೀತಿಗೆ ಬೆಲೆ ಕಟ್ಟಲು ಖಂಡಿತವಾಗಿಯೂ ಸಾಧ್ಯವಿಲ್ಲ.. ತಾಯಿ ಎನ್ನುವುದು ಕೇವಲ ಒಂದು ಪದವಲ್ಲ ಅದೊಂದು ಉಸಿರು.. ಒಬ್ಬ ಮಗುವನ್ನು ತಾಯಿಗಿಂತ ಹೆಚ್ಚಾಗಿ ಯಾರೂ ಪ್ರೀತಿಸಲಾರರು.. ಮಾತೃ ಎಂಬ ಪದಕ್ಕೆ ಇರುವಂತಹಾ ಮಹತ್ವ ವರ್ಣಿಸಲಸಾಧ್ಯ.. ಭಾರತೀಯ ಪರಂಪರೆಯಲ್ಲಿ ತಾಯಿಗೆ ಮಹತ್ತರ ಸ್ಥಾನವಿದೆ.. ನಮ್ಮನ್ನು ಎಲ್ಲಾ ಹೊತ್ತಿರುವ ಭೂಮಿಯನ್ನು ತಾಯಿ ಎಂದು ಸಂಭೋದಿಸುತ್ತೇವೆ.. ವಿಧ್ಯೆಗೆ ಅಧಿಪತಿಯಾಗಿರುವ ಶಾರದೆ ಆಕೆಯನ್ನು ತಾಯಿ ಎಂದೇ ಸಂಭೋಧಿಸುತ್ತೇವೆ.. ತಾಯಿಯ ಎದೆಹಾಲು ಸೇವಿಸಿ ಬೆಳೆದ ನಾವುಗಳು ಬಳಿಕ ಸೇವಿಸುವುದೇ ಕಾಮಧೇನುವಿನ ಹಾಲನ್ನು ಅದಕ್ಕಾಗಿಯೇ ಆಕೆಗೂ ಗೋಮಾತೆ ಎಂಬ ಸ್ಥಾನವಿದೆ ನಾವೆಷ್ಟೇ ತಪ್ಪು ಮಾಡಿದರೂ ಎಷ್ಟೇ ನೋವು ನೀಡಿದರೂ ಅದನ್ನೆಲ್ಲಾ ಸಹಿಸಿಕೊಳ್ಳುವಳು ತಾಯಿ ಅದಕ್ಕಾಗಿಯೇ ಆಕೆಗೆ ಮಹತ್ತರ ಸ್ಥಾನ…
ತಾಯಿ ತಾನೇ ಮೊದಲ ಗುರು
ಪ್ರೀತಿ ಪಾಠ ಆಕೆಯಿಂದ ಶುರು
ಅಮ್ಮನ ಹೃದಯದಿ ನನ್ನ ವಿಹಾರ
ಅಮ್ಮನ ನೆನೆದರೆ ಕಷ್ಟಗಳೇ ಪರಿಹಾರ
ಈ ಮಾತು ಎಷ್ಟು ಸತ್ಯ .. ಒಂದು ಮಗು ತೊದಲುತ್ತಾ ಮದಲು ನುಡಿಯುವ ಮಾತೇ ಅಮ್ಮಾ.. ನೋವಿರಲು ಸಂತಸವಿರಲಿ ಮಗುವಿಗೆ ತಿಳಿದಿರುವ ಒಂದೇ ಮಾತು.. ಅಮ್ಮಾ.. ಅಂತೆಯೇ ಬಾಲ್ಯದಲ್ಲಿಯೇ ಮಗುವಿಗೆ ಉತ್ತಮ ಸಂಸ್ಕಾರವನ್ನು ಕಲಿಸುವಲ್ಲಿ ತಾಯಿ ಮಹತ್ತರ ಪಾತ್ರ ವಹಿಸುತ್ತಾಳೆ , ಮಗುವಿನ ಅಕ್ಷರಾಭ್ಯಾಸದಿಂದ ಹಿಡಿದು ಮಗುವಿನ ಸರ್ವತೋಮುಖ ಏಳಿಗೆಯ ವರೆಗೂ ತಾಯಿ ಶಮ ವಹಿಸುತ್ತಾಳೆ ಎಂದರೆ ತಪ್ಪಾಗಲಾರದು.
ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲು ಖಂಡಿತವಾಗಿಯೂ ಸಾಧ್ಯವಿಲ್ಲ.. ಒಂಬತ್ತು ತಿಂಗಳು ಗರ್ಭದಲ್ಲಿ ತನ್ನ ಮಗುವನ್ನು ಹೊತ್ತು ತಿರುಗುವ ಮಾತೆ ಎಂದಿಗೂ ತನ್ನ ನೋವಿಗೆ ಬೇಸರಿಸುವವಳಲ್ಲ.. ಇನ್ನು ಮಗುವಿಗೆ ಜನ್ಮ ನೀಡುವಂತಹಾ ಸಂದರ್ಭದಲ್ಲಿ ದೇಹದಲ್ಲಿ ಇರುವ ಎಲ್ಲಾ ಮೂಳೆಗಳು ಮುರಿದು ಹೋಗುವಂತೆ ನೋವಾದರೂ ತಾಯಿ ಮಗುವಿನ ನಗುವಲ್ಲಿ ತನ್ನ ನೋವನ್ನೇಲ್ಲಾ ಮರೆಯುತ್ತಾಳೆ.. ಮಗುವಿನ ನಗುವಲ್ಲಿ ತನ್ನ ಸಂತಸವನ್ನು ಕಾಣುವವಳೇ ತಾಯಿ... ತನಗೆ ಎಷ್ಟೇ ನೋವಾದರೂ ತನಗೆ ಎಷ್ಟೇ ಬೇಸರವಾದರೂ ತನ್ನ ಕಂದಮ್ಮನಿಗೆ ಏನೂ ಆಗಬಾರದೆಂಬಂತೆ ತನ್ನ ಎದೆಯ ಗೂಡಿನಲ್ಲಿ ಬಚ್ಚಿಟ್ಟುಕೊಂಡು ತನ್ನ ಕಂದಮ್ಮನ್ನನ್ನು ಕಾಪಾಡುವವರು ತಾಯಿ ಮಾತ್ರ... ತನ್ನೆಲ್ಲಾ ನೋವನ್ನು ಬದಿಗೊತ್ತಿ ಮಗುವಿನ ಸಾರ್ಥಕ್ಯಕ್ಕಾಗಿ ಜೀವ ಸವೆಸುತ್ತಾಳಲ್ಲಾ ಆ ತಾಯಿ ನಿಜವಾಗಿಯೂ ಪ್ರಶಂಸನಾರ್ಹಳೇ ಸರಿ..
ಅಮ್ಮ ನೀಡುವ ಕೈತುತ್ತು ಅಮೃತವಿದ್ದಂತೆ ಎಂಬ ಮಾತಿದೆ... ಅಮ್ಮನ ಅಡುಗೆ ರುಚಿಯನ್ನು ಯಾವುದೇ 5 ಸ್ಟಾರ್ ಹೋಟೆಲ್ ನೀಡಲಾರದು... ಪ್ರೀತಿಯಿಂದ ತಾಯಿ ನೀಡುವ ಒಂದು ತುತ್ತು ನಮಗೆ ಸ್ವರ್ಗ ಸಮಾನ, ತಾನು ಉಪವಾಸವಿದ್ದರೂ ಪರವಾಗಿಲ್ಲ ತನ್ನ ಮಕ್ಕಳ ಹೊಟ್ಟೆ ತಣ್ಣಗಿರಲಿ ಎಂದು ಭಾವಿಸಲು ತಾಯಿಗೆ ಮಾತ್ರ ಸಾಧ್ಯ.
ಆದರೆ ಇಂದು ಪಾಶ್ಚಿಮಾತ್ಯರ ಅನುಕರಣೆಯಿಂದ ನಾವು ತಾಯಿಯ ಮಹತ್ವವನ್ನೇ ಮರೆತಿದ್ದೇವೆ.. ತನಗೊಂದು ಮಾತು ಬೈದಳೆಂದು ತಾಯಿಯ ಬಳಿ ಮಾತು ಬಿಟ್ಟಂತವರು ನಮ್ಮ ನಡುವೆ ಎಷ್ಟೋ ಜನಗಳಿರಬಹುದು, ತಾನು ಕೇಳಿದ್ದನ್ನು ತಾಯಿ ತೆಗೆದುಕೊಡಲಿಲ್ಲ ಎಂದು ಅತ್ತೂ ಕರೆದು ತಾಯಿಯ ಮೇಲೆ ಕೋಪಿಸಿಕೊಂಡವರೂ ನಮ್ಮ ನಡುವೆ ಇರಬಹುದು. ತಾಯಿ ತನ್ನ ಮಾತನ್ನು ವಿರೋಧಿಸಿದಳೆಂದು ಆಕೆಯ ಮೇಲೆ ಕೈ ಮಾಡಿದ ಎಷ್ಟೋ ಮಂದಿ ನಮ್ಮ ನಡುವಿರಬಹುದು, ಆದರೆ ಇಂತಹಾ ಕೃತ್ಯಗಳನ್ನು ಮಾಡುವ ಮುಂಚೆ ಯೋಚಿಸಿ, ತಾಯಿ ನಿಮ್ಮನ್ನು ಬೆಳೆಸಲು ಪಟ್ಟ ಶ್ರಮವನ್ನು ಒಮ್ಮೆ ನೆನಪಿಸಿ, ನಿಮ್ಮನ್ನು ಸಾಕಿ ಸಲಹುವಲ್ಲಿ ಆಕೆ ಪಟ್ಟ ಶ್ರಮವನ್ನೊಮ್ಮೆ ನೆನಪಿಸಿ.. ಬಾಲ್ಯದಲ್ಲಿ ನೀವು ಎಲ್ಲೆಂದರಲ್ಲಿ ಅಲೆದಾಡುವಾಗ ತನ್ನ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮನ್ನು ಸಾಕಿದ್ದನ್ನೊಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಜನ್ಮದ ಸಂದರ್ಭದಲ್ಲಿ ತಾಯಿ ಪಟ್ಟ ನೋವನ್ನೊಮ್ಮೆ ನೆನಪಿಸಿಕೊಳ್ಳಿ.. ಇಂತಹಾ ಪ್ರೀತಿಯನ್ನು ನೀಡಿದ ತಾಯಿಯನ್ನು ನೀವು ದೂಷಿಸುವುದಾದರೆ ದೂಷಿಸಿ.. ಹೇಳುವ ಮಾತು ಹೇಳಿಯಾಯಿತು ಇನ್ನು ತರ್ಕ ನಿಮಗೆ ಬಿಟ್ಟದ್ದು..
ಜೈ ಮಾತಾ..
ಕೊನೆಯದಾಗಿ ಮಾತಾ ಶ್ರೀ ಶಾರದಾದೇವಿ ಹಾಗೂ ಶ್ರೀ ರಾಮಕೃಷ್ಣ ಪರಮಹಂಸರನ್ನು ನೆನೆಯುತ್ತಾ ಮಾತಿಗೆ ವಿರಾಮ ಇಡಲಿಚ್ಛಿಸುತ್ತೇನೆ
ಮಾತಾ ಮೇ ಶಾರಾದಾದೇವಿ ರಾಮಕೃಷ್ಣಪ್ರಭುಃ ಪಿತಾ
ಬಾಂಧವಾಃ ಸಕಲಾ ಭಕ್ತಾಃ ಸ್ವದೇಶೋ ಭುವನತ್ರಯಂ
ಜಗತ್ತಿಗೆ ಮಾತೆ ಶ್ರೀ ಶಾರದಾದೇವಿಯೆನಿಸಿದ್ದರೆ , ಪಿತಾಸ್ವರೂಪಿ ಶ್ರೀ ರಾಮಕೃಷ್ಣರು, ಭಕ್ತಜನರೆಲ್ಲರೂ ಮಕ್ಕಳಂತೆಂದಾದಾಗ , ತ್ರಿಲೋಕವೂ ಸ್ವದೇಶವೇ ಆಗಿದೆ..
ಶ್ರೀ ಕೃಷ್ಣಾರ್ಪಣಮಸ್ತು..
ತಾಯಿ ತಾನೇ ಮೊದಲ ಗುರು
ಪ್ರೀತಿ ಪಾಠ ಆಕೆಯಿಂದ ಶುರು
ಅಮ್ಮನ ಹೃದಯದಿ ನನ್ನ ವಿಹಾರ
ಅಮ್ಮನ ನೆನೆದರೆ ಕಷ್ಟಗಳೇ ಪರಿಹಾರ
ಈ ಮಾತು ಎಷ್ಟು ಸತ್ಯ .. ಒಂದು ಮಗು ತೊದಲುತ್ತಾ ಮದಲು ನುಡಿಯುವ ಮಾತೇ ಅಮ್ಮಾ.. ನೋವಿರಲು ಸಂತಸವಿರಲಿ ಮಗುವಿಗೆ ತಿಳಿದಿರುವ ಒಂದೇ ಮಾತು.. ಅಮ್ಮಾ.. ಅಂತೆಯೇ ಬಾಲ್ಯದಲ್ಲಿಯೇ ಮಗುವಿಗೆ ಉತ್ತಮ ಸಂಸ್ಕಾರವನ್ನು ಕಲಿಸುವಲ್ಲಿ ತಾಯಿ ಮಹತ್ತರ ಪಾತ್ರ ವಹಿಸುತ್ತಾಳೆ , ಮಗುವಿನ ಅಕ್ಷರಾಭ್ಯಾಸದಿಂದ ಹಿಡಿದು ಮಗುವಿನ ಸರ್ವತೋಮುಖ ಏಳಿಗೆಯ ವರೆಗೂ ತಾಯಿ ಶಮ ವಹಿಸುತ್ತಾಳೆ ಎಂದರೆ ತಪ್ಪಾಗಲಾರದು.
ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಹುಟ್ಟಬಹುದು ಆದರೆ ಕೆಟ್ಟ ತಾಯಿ ಇರಲು ಖಂಡಿತವಾಗಿಯೂ ಸಾಧ್ಯವಿಲ್ಲ.. ಒಂಬತ್ತು ತಿಂಗಳು ಗರ್ಭದಲ್ಲಿ ತನ್ನ ಮಗುವನ್ನು ಹೊತ್ತು ತಿರುಗುವ ಮಾತೆ ಎಂದಿಗೂ ತನ್ನ ನೋವಿಗೆ ಬೇಸರಿಸುವವಳಲ್ಲ.. ಇನ್ನು ಮಗುವಿಗೆ ಜನ್ಮ ನೀಡುವಂತಹಾ ಸಂದರ್ಭದಲ್ಲಿ ದೇಹದಲ್ಲಿ ಇರುವ ಎಲ್ಲಾ ಮೂಳೆಗಳು ಮುರಿದು ಹೋಗುವಂತೆ ನೋವಾದರೂ ತಾಯಿ ಮಗುವಿನ ನಗುವಲ್ಲಿ ತನ್ನ ನೋವನ್ನೇಲ್ಲಾ ಮರೆಯುತ್ತಾಳೆ.. ಮಗುವಿನ ನಗುವಲ್ಲಿ ತನ್ನ ಸಂತಸವನ್ನು ಕಾಣುವವಳೇ ತಾಯಿ... ತನಗೆ ಎಷ್ಟೇ ನೋವಾದರೂ ತನಗೆ ಎಷ್ಟೇ ಬೇಸರವಾದರೂ ತನ್ನ ಕಂದಮ್ಮನಿಗೆ ಏನೂ ಆಗಬಾರದೆಂಬಂತೆ ತನ್ನ ಎದೆಯ ಗೂಡಿನಲ್ಲಿ ಬಚ್ಚಿಟ್ಟುಕೊಂಡು ತನ್ನ ಕಂದಮ್ಮನ್ನನ್ನು ಕಾಪಾಡುವವರು ತಾಯಿ ಮಾತ್ರ... ತನ್ನೆಲ್ಲಾ ನೋವನ್ನು ಬದಿಗೊತ್ತಿ ಮಗುವಿನ ಸಾರ್ಥಕ್ಯಕ್ಕಾಗಿ ಜೀವ ಸವೆಸುತ್ತಾಳಲ್ಲಾ ಆ ತಾಯಿ ನಿಜವಾಗಿಯೂ ಪ್ರಶಂಸನಾರ್ಹಳೇ ಸರಿ..
ಅಮ್ಮ ನೀಡುವ ಕೈತುತ್ತು ಅಮೃತವಿದ್ದಂತೆ ಎಂಬ ಮಾತಿದೆ... ಅಮ್ಮನ ಅಡುಗೆ ರುಚಿಯನ್ನು ಯಾವುದೇ 5 ಸ್ಟಾರ್ ಹೋಟೆಲ್ ನೀಡಲಾರದು... ಪ್ರೀತಿಯಿಂದ ತಾಯಿ ನೀಡುವ ಒಂದು ತುತ್ತು ನಮಗೆ ಸ್ವರ್ಗ ಸಮಾನ, ತಾನು ಉಪವಾಸವಿದ್ದರೂ ಪರವಾಗಿಲ್ಲ ತನ್ನ ಮಕ್ಕಳ ಹೊಟ್ಟೆ ತಣ್ಣಗಿರಲಿ ಎಂದು ಭಾವಿಸಲು ತಾಯಿಗೆ ಮಾತ್ರ ಸಾಧ್ಯ.
ಆದರೆ ಇಂದು ಪಾಶ್ಚಿಮಾತ್ಯರ ಅನುಕರಣೆಯಿಂದ ನಾವು ತಾಯಿಯ ಮಹತ್ವವನ್ನೇ ಮರೆತಿದ್ದೇವೆ.. ತನಗೊಂದು ಮಾತು ಬೈದಳೆಂದು ತಾಯಿಯ ಬಳಿ ಮಾತು ಬಿಟ್ಟಂತವರು ನಮ್ಮ ನಡುವೆ ಎಷ್ಟೋ ಜನಗಳಿರಬಹುದು, ತಾನು ಕೇಳಿದ್ದನ್ನು ತಾಯಿ ತೆಗೆದುಕೊಡಲಿಲ್ಲ ಎಂದು ಅತ್ತೂ ಕರೆದು ತಾಯಿಯ ಮೇಲೆ ಕೋಪಿಸಿಕೊಂಡವರೂ ನಮ್ಮ ನಡುವೆ ಇರಬಹುದು. ತಾಯಿ ತನ್ನ ಮಾತನ್ನು ವಿರೋಧಿಸಿದಳೆಂದು ಆಕೆಯ ಮೇಲೆ ಕೈ ಮಾಡಿದ ಎಷ್ಟೋ ಮಂದಿ ನಮ್ಮ ನಡುವಿರಬಹುದು, ಆದರೆ ಇಂತಹಾ ಕೃತ್ಯಗಳನ್ನು ಮಾಡುವ ಮುಂಚೆ ಯೋಚಿಸಿ, ತಾಯಿ ನಿಮ್ಮನ್ನು ಬೆಳೆಸಲು ಪಟ್ಟ ಶ್ರಮವನ್ನು ಒಮ್ಮೆ ನೆನಪಿಸಿ, ನಿಮ್ಮನ್ನು ಸಾಕಿ ಸಲಹುವಲ್ಲಿ ಆಕೆ ಪಟ್ಟ ಶ್ರಮವನ್ನೊಮ್ಮೆ ನೆನಪಿಸಿ.. ಬಾಲ್ಯದಲ್ಲಿ ನೀವು ಎಲ್ಲೆಂದರಲ್ಲಿ ಅಲೆದಾಡುವಾಗ ತನ್ನ ಕಣ್ಣಲ್ಲಿ ಕಣ್ಣಿಟ್ಟು ನಿಮ್ಮನ್ನು ಸಾಕಿದ್ದನ್ನೊಮ್ಮೆ ನೆನಪಿಸಿಕೊಳ್ಳಿ. ನಿಮ್ಮ ಜನ್ಮದ ಸಂದರ್ಭದಲ್ಲಿ ತಾಯಿ ಪಟ್ಟ ನೋವನ್ನೊಮ್ಮೆ ನೆನಪಿಸಿಕೊಳ್ಳಿ.. ಇಂತಹಾ ಪ್ರೀತಿಯನ್ನು ನೀಡಿದ ತಾಯಿಯನ್ನು ನೀವು ದೂಷಿಸುವುದಾದರೆ ದೂಷಿಸಿ.. ಹೇಳುವ ಮಾತು ಹೇಳಿಯಾಯಿತು ಇನ್ನು ತರ್ಕ ನಿಮಗೆ ಬಿಟ್ಟದ್ದು..
ಜೈ ಮಾತಾ..
ಕೊನೆಯದಾಗಿ ಮಾತಾ ಶ್ರೀ ಶಾರದಾದೇವಿ ಹಾಗೂ ಶ್ರೀ ರಾಮಕೃಷ್ಣ ಪರಮಹಂಸರನ್ನು ನೆನೆಯುತ್ತಾ ಮಾತಿಗೆ ವಿರಾಮ ಇಡಲಿಚ್ಛಿಸುತ್ತೇನೆ
ಮಾತಾ ಮೇ ಶಾರಾದಾದೇವಿ ರಾಮಕೃಷ್ಣಪ್ರಭುಃ ಪಿತಾ
ಬಾಂಧವಾಃ ಸಕಲಾ ಭಕ್ತಾಃ ಸ್ವದೇಶೋ ಭುವನತ್ರಯಂ
ಜಗತ್ತಿಗೆ ಮಾತೆ ಶ್ರೀ ಶಾರದಾದೇವಿಯೆನಿಸಿದ್ದರೆ , ಪಿತಾಸ್ವರೂಪಿ ಶ್ರೀ ರಾಮಕೃಷ್ಣರು, ಭಕ್ತಜನರೆಲ್ಲರೂ ಮಕ್ಕಳಂತೆಂದಾದಾಗ , ತ್ರಿಲೋಕವೂ ಸ್ವದೇಶವೇ ಆಗಿದೆ..
ಶ್ರೀ ಕೃಷ್ಣಾರ್ಪಣಮಸ್ತು..

No comments:
Post a Comment