Sunday, 17 November 2019

ದೇವರು ಕೊಟ್ಟ ಪ್ರೀತಿಯ ಆಸ್ತಿ ಈ ಚೆಲುವೆ....


ಆಕೆ ನನ್ನ ಜೊತೆ ಹುಟ್ಟಿದವಳಲ್ಲ.. ನನ್ನ ರಕ್ತ ಸಂಬಂಧಿಯೂ ಅಲ್ಲ.. ಆದರೆ ಆಕೆಯೆಂದರೆ ನನ್ನ ಹೃದಯದಲ್ಲಿದೆ ಪ್ರೀತಿಯ ಜಾಗ. ಆಕೆಯ ಮಾತುಗಳೆಂದರೆ ನನಗೇನೋ ವಿಶೇಷ ಸ್ಪೂರ್ತಿ ಅದೇಕೋ ಗೊತ್ತಿಲ್ಲ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತವಾದ ಒಬ್ಬಾಕೆ ನನ್ನ ಜೀವನದ ಮೇಲೆ ಇಷ್ಟೋದು ಪ್ರಭಾವ ಬೀರುತ್ತಾಳೇ ಎಂದು ಸ್ವತಃ ನಾನೇ ಯೋಚಿಸಿರಲಿಲ್ಲವೇನೋ… ಅಷ್ಟಕ್ಕೂ ಆಕೆ ಯಾರು, ಆಕೆಯೆಂದರೆ ನನಗೇಕೆ ಪ್ರೀತಿ ಎಲ್ಲವನ್ನೂ ತಿಳೀಯುವ ಕುತೂಹಲ ನಿಮಗಿದ್ರೆ ಈ ಪ್ರೀತಿಯ ಕಥೆಯನ್ನು ನೀವು ಓದಲೇ ಬೇಕು.
                        ಎಂದಿನಂತೆ ಅಂದು ನಾನು ನನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಕ್ರಾಲ್​ ಮಾಡುತ್ತಲಿದ್ದೆ, ಬಹಳ ದಿನಗಳಿಂದ ಕಾಡುತ್ತಿದ್ದ ಹೆಸರೊಂದು ಇಂದೂ ನನ್ನ ಕಣ್ಣಿಗೆ ಬಿದ್ದೇ ಬಿಡ್ತು ನೋಡಿ. ಆಗಿದ್ದಾಗಲಿ ಆಕೆಯ ಪೂರ್ವಾಪರ ವಿಚಾರಿಸಿಯೇ ಬಿಡೋಣ ಎಂದು ನಾನು ಆಕೆಯ ಗೆಳೆತನ ಬಯಸಲು ಆಕೆಗೆ ರಿಕ್ವೆಷ್ಟ್ ಕಳುಹಿಸಿಯೇ ಬಿಟ್ಟೆ… ಒಂದೈದು ನಿಮಿಷದೊಳಗೆ ನನ್ನ ಸಂಚಾರಿವಾಣಿಯ ಡಿಸ್ಪ್ಲೆ ನಲ್ಲಿ ಆಕೆ ನನ್ನ ರಿಕ್ವೆಸ್ಟ್​ ಸ್ವೀಕರಿಸಿದ್ದರ ಬಗ್ಗೆ ನೋಟಿಫಿಕೇಷನ್​ ಬಂದಾಗಿತ್ತು. ಖುಷಿಯಿದಲೇ ಆಕೆಗೊಂದು ಹಾಯ್ ಮಾಡಿಯೇ ಬಿಟ್ಟಿದ್ದೆ. ಕೊಂಚ ಸಮಯದ ಬಳಿಕ ಆಕೆಯಿಂದ ರಿಪ್ಲೈ ಬಂದಿತ್ತು ನೋಡಿ.. ಸ್ವರ್ಗಕ್ಕೆ ಮೂರೇ ಗೇಣು ಎಂಬಂತೆ ಮೆಸೇಜ್ ಮೇಲೆ ಮೆಸೇಜ್ ಕಳುಹಿಸುತ್ತಲಿದ್ದೆ.


  ಹೀಗೆ ಪ್ರಾರಂಭವಾಯಿತು ನೋಡಿ ನಮ್ಮಿಬ್ಬರ ಸ್ನೇಹ… ಆಕೆಯಿರುವುದೂ ನಾನಿರುವುದೂ ಒಂದೇ ಊರಿನಲ್ಲಿ ಎಂದು ತಿಳಿಯುವುದೇ ತಡ ನನ್ನ ಖುಷಿ ದುಪ್ಪಟ್ಟಾಗಿತ್ತು, ಈ ನಡುವೆ ಆತ್ಮೀಯತೆ ಹೆಚ್ಚಾದಂತೆ ರಾಜಕೀಯ, ವಿದ್ಯಾರ್ಥಿ ಜೀವನ, ಕೆಲಸ ಇವೆಲ್ಲದರ ಕುರಿತಾಗಿ ಮಾತುಕಥೆ ನಡೆಯುತ್ತಲೇ ಇತ್ತು ಆದರೆ ಇನ್ಸ್ಟಾಗ್ರಾಂನಲ್ಲಿ ಅಲ್ಲ ಬದಲಾಗಿ ಫೋನ್ ನಂಬರ್​ ವಿನಿಮಯವಾಗಿ ನಮ್ಮ ಮಾತುಕತೆ ಸಾಗಿತ್ತು…..
 ಆಕೆಯ ಬಗ್ಗೆ ಹೇಳಲು ಬಹಳಷ್ಟಿದೆ.. ಚೋಟುದ್ದ ಇರುವ ಆಕೆಯ ಮೊಗದಲ್ಲಿ ಮಂದಹಾಸ ಎಂದೂ ಮಾಸಿದ್ದನ್ನು ನಾನು ಕಂಡಿಲ್ಲ...  ಆಕೆಯೆಂದರೆ ನನಗೇನೋ ಸ್ಫೂರ್ತಿ.. ಆಕೆಯ ಮಾತುಗಳೇ ನೊಂದ ಮನಸ್ಸಿಗೆ ನೆಮ್ಮದಿ ನೀಡುವ ಸ್ಥಾನ.  ಇಷ್ಟಿದ್ದರೂ ಸುಮಾರು 6 ತಿಂಗಳುಗಳ ಕಾಲ ನಾವು ಮೀಟ್ ಆಗಿಯೇ ಇಲ್ಲ..
ಒಂದು ದಿನ ನಾನು ಮಂಗಳೂರಿನಲ್ಲಿದೆ, ಆಕೆಯೂ ಕಾರ್ಯನಿಮಿತ್ತ ಮಂಗಳೂರಿಗೆ  ಆಗಮಿಸಿದ್ದಳು. ಇನ್ನು ಭೇಟಿಯಾಗದಿದ್ದರೆ ಹೇಗೆ ಎಂದು ಆಕೆಯನ್ನು ಪ್ರಶ್ನಿಸಿಯೇ ಬಿಟ್ಟೆ, ಅಂತೂ ಇಂತೂ ಮಂಗಳೂರಿನ ಸಿಟಿ ಸೆಂಟರ್​ನ ಮುಂಭಾಗದಲ್ಲಿ ಭೇಟಿಯಾಗಿ ಒಂದು ಫೋಟೋ ಕ್ಲಿಕ್ಕಿಸಿಕೊಂಡು ಸಮಾಧಾನಪಟ್ಟಿದ್ದಾಯ್ತು..
 ಮತ್ತೆ ಕಾರ್ಯನಿಮಿತ್ತ ಬೆಂಗಳೂರು ಬಂದರೂ ಕೆಲಸದ ಒತ್ತಡದಿಂದ ಆಕೆಯನ್ನು ಭೇಟಿಯಾಗಲು ಆಗಿರಲಿಲ್ಲ.. ಆದ್ರೆ ನನ್ನ ಕೆಲಸಕ್ಕೆ  ರಾಜಿನಾಮೆಯಿತ್ತು, ಊರಿಗೆ ಹೋಗುವ ಮುನ್ನ ಆಕೆಯನ್ನು ಭೇಟಿಯಾಗುವ ಮನಸ್ಸಾಗಿತ್ತು. ಅದೃಷ್ಟವಶಾತ್​ ಆಕೆ ಮನೆಯಲ್ಲಿದ್ದಳು , ಆಕೆಯ ಮನೆಗೆ ಹೋಗಿದ್ದೆ.  ಮಾತನಾಡುತ್ತಾ ಸಮಯ ಕಳೆದ್ದದ್ದೇ ತಿಳಿಯಲಿಲ್ಲ. ಆಕೆಯ ತಂದೆ , ತಾಯಿ ಇತ್ತ ಪ್ರೀತಿ , ಆಕೆಯ ಮುಗ್ದ ಮನಸ್ಸಿನ ಮುಕ್ತ ಮಾತು, ಇವೆಲ್ಲವನ್ನು ನೋಡುತ್ತಾ ನನ್ನದೇ ಸ್ವಂತ ಕುಟುಂಬದ ಮಧ್ಯೆ ಇದ್ದೆನೋ ಎಂಬಂತೆ ಭಾಸವಾಗಿತ್ತು. ಆಕೆಯ ತಂದೆ- ತಾಯಿಯ ಪ್ರೀತಿ, ಆಕೆ ನನಗಿತ್ತ ಅಭಯ ಇವೆಲ್ಲವನ್ನೂ ನೋಡಿ ವಾಪಾಸ್​ ಬರುವಾಗ ನನ್ನ ಕಣ್ಣಾಲಿಗಳು ತೇವವಾಗಿದ್ದವು..
ಯಾವಾಗ್ಲೋ ನಡೆದ ವಿಷಯಕ್ಕೆ ಇಂದೇಕೆ ಬರೆಯುತ್ತಿದ್ದೇನೆ ಎಂದು ಯೋಚಿಸದಿರಿ, ಕಾರಣವಿದೆ. ನನ್ನ ಮನಸ್ಸು ವಿಹ್ವಲವಾಗಿದ್ದಾಗ, ಆಕೆ ಎಂದಿಗೂ ನನ್ನೊಂದಿಗಿದ್ದಳು. ಇಂದು ನನ್ನನ್ನು ಬೇಟಿಯಾಗಲು ಬಂದಾಗಲೂ ಆಕೆಯ ಮನೆಯ ಪ್ರೀತಿಯ ಸ್ವಾದದ ಚಪಾತಿಯನ್ನೂ ತಂದಿದ್ದಳು… ಜೀವನದ ಪಯಣದಲ್ಲಿ ಆಕೆ ಎಷ್ಟರ ವರೆಗೆ ನನ್ನೊಂದಿಗಿರುತ್ತಾಳೋ ತಿಳಿಯದು ಆದರೆ ಆಕೆ ಇರುವಷ್ಟು ಕಾಲ ನಾನು ಖುಷಿಯಿಂದಿರುವೆ ಎಂಬ ನಂಬಿಕೆ ನನಗಿದೆ. ನಮ್ಮಿಬ್ಬರ ಸೋದರತೆಯ ಬಂಧನ ಹೀಗೆ ಇರಬೇಕೆನ್ನುವ ಆಶಯ ನನ್ನದು.. ಹೇಗೆ ಇದ್ದರೂ ನೀ ನನ್ನೊಡನೆ ಇರುವೆಯೆಂಬ ನಂಬಿಕೆ ನನ್ನದು..
ಓಹ್ ಇಷ್ಟರ ಮಧ್ಯೆ ಆಕೆ ಯಾರೆಂದು ನಾನು ಹೇಳಿಯೇ ಇಲ್ಲವಲ್ಲ…
ಆಕೆ ಬೇರಾರೂ ಅಲ್ಲ … ನನಗಾಗೇ ದೇವರು ಕೊಟ್ಟ ತಂಗಿ  “ವಿದ್ಯಾ”

Wednesday, 13 November 2019

ಬೆಂಗಳೂರೆಂಬ ಹೈಟೆಕ್​ ಹಳ್ಳಿ



ಬೆಂಗಳೂರು : ಹೆಸರು ಕೇಳಿದೊಡನೆ ನಮ್ಮ ಕಲ್ಪನಾ ಲೋಕದಲ್ಲಿ ಅನೆಕಾನೇಕ ಚಿತ್ರವಿಚಿತ್ರ ವಿಚಾರಗಳು ಹರಿದಾಡಲು ಪ್ರಾರಂಭವಾಗುತ್ತದೆ,  ಸಾಲು ಸಾಲು ಗಗನಚುಂಬಿ ಕಟ್ಟಡಗಳು, ವಿಧಾನಸೌಧ , ಹೈಕೋರ್ಟ್​ , ಅದರ ಮುಂಭಾಗದಲ್ಲಿ ಇರುವ ಕಬ್ಬನ್​ ಪಾಕ್​ , ಲಾಲ್​ಭಾಗ್​ ಮುಂತಧ ಕಲ್ಪನೆಗಳು ಮನಃಪಲ್ಲಟದಲ್ಲಿ ಮೂಡಿ ಮರೆಯಾಗುತ್ತದೆ. ಆದ್ರೆಆ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ಒಂದೆರಡು ದಿನ ಅಲೆದಾಡಿ ನೋಡಿ ನಾ ಕಲ್ಪಿಸಿಕೊಂಡ ಬೆಂಗಳೂರು ಇದೇನಾ ಎಂದು ನೀವು ಬೆರಳಿನ ಮೇಲೆ ಕೈ ಇಟ್ಟುಕೊಳ್ಳುವಿರೇನೋ…
   ಹೌದು ಬೆಂಗಳೂರು ಅದಂದು ಹೆಸರಲ್ಲ.. ಭಾರತದ ಐಟಿ ಹಬ್​ ಎಂದೇ ಕರೆಯಲ್ಪಡುವ ಕರ್ನಾಟಕದ ರಾಜಧಾನಿ, ಅನೇಕ ಸ್ಟಾರ್ಟಪ್ ಕಂಪೆನಿಗಳಿಗೆ ತಾಯಿಯಂತೆ ತನ್ನೊಡಲನ್ನು ನೀಡಿದ ಜಾಗವದು, ಸಾಧನೆ ಮಾಡಬೇಕು ಎಂದು ಆಗಮಿಸುವ ಕೆಲವರಿಗೆ ಸಿಹಿ ನನಿಡಿದ್ದರೆ ಇನ್ನು ಕೆಲವರಿಗೆ ಕಹಿಯುಣಿಸಿ ಪಾಠ ಕಲಿಸಿದ ದೇವತೆ.. ಆದ್ರೆ ಅದೊಂದು ದೊಡ್ಡ ಪಟ್ಟಣವಲ್ಲ, ಬದಲಾಗಿ ಅದೊಂದು ಹಾಳು ಕೊಂಪೆಯೆಂಬ ಹಳ್ಳಿ  ಎಂದರೆ ಸೂಕ್ತ ಎನ್ನುವುದು ನನ್ನ ಭಾವನೆ , ಯಾಕೆ ಅಂತೀರಾ?? ಬನ್ನಿ ಮಾತಾಡೋಣ..

  ಬೆಂಗಳೂರು ನಗರ ಎಲ್ಲಾ ರೀತಿಯ ಮೂಲಸೌಕರ್ಯ ಹೊಂದಿದ್ದರೂ ಯಾವುದೇ ಮೂಲಸೌಕರ್ಯವಿಲ್ಲದ ಹಳ್ಳಿಗೂ ಕಡೆ ಎಂದು ಹೇಳಬೇಕು, ಊರಿನ ನಡುವೆ ಹರಿಯುವನ ಕೊಳಚೆ ಕಾಲುವೆಗಳು, ಅಲ್ಲಲ್ಲಿ ಕೈಗಾಡಿಗಳಲ್ಲಿ ಸೊಪ್ಪು, ಪ್ಲಾಸ್ಟಿಕ್​, ಹಣ್ಣುಗಳನ್ನು ಮಾರುತ್ತಲಿರುವ ಜನರು, ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ನಾರುವ ಕಸದ ರಾಶಿಗಳು, ಅಲ್ಲಲ್ಲಿ ಅಲೆದಾಡುತ್ತಾ ಒಳಿದಿರುವ ಅಲ್ಪಸ್ವಲ್ಪ ಹಸಿರನ್ನು ಸೇವಿಸುತ್ತಿರುವ ಅಲೆಮಾರಿ ದನಗಳು,. ಬೆಳಗ್ಗೆದ್ದು ರಾಕ್ಷಸರಂತೆ ಕೂದಲು ಹರವಿಕೊಂಡು ಕುಳಿತಿರುವ ಆಂಟಿ ಮಣೀಯರು, ಇವೆಲ್ಲವನ್ನು ನೋಡುತ್ತಿದ್ದರೆ ಮೂಲಸೌಕರ್ಯವಿಲ್ಲದೆ ಬಿದ್ದಿರುವ ಹಳ್ಳಿಗಳಂತೆ ಭಾಸವಾಗುತ್ತದೆ. ಅದೇಕೋ ಏನೋ ಬೆಂಗಳೂರಿನ ಕೆಲವ ಏರಿಯಾಗಳನ್ನು ನೋಡಿದರೆ ಇದ್ಯಾವ್ದಪ್ಪಾ ಹಾಳು ಕೊಂಪೆ ಎಂದು ನಿಮ್ಮ ಮೂಗಿನ ಮೇಲೆ ನೀವೇ ಕೈ ಇಟ್ಟುಕೊಳ್ಳುವಿರೇನೋ..
ಹೌದು ಬೆಂಗಳುರಿನ ಕೆಲವು ಜನರು ಅಲ್ಲ‘ಲ್ಲ. ಬಹುತೇಕ ಜನರು ಇಂದು ನೈತಿಕತೆ ಇಲ್ಲದೇ ಬದುಕುತ್ತಿದ್ದಾರೆ ಎಂದು ಭಾಸವಾಗುತ್ತದೆ. ಎಲ್ಲಿ ಕಸ ಬಿಸಾಡಬೇಡಿ ಎಂದು ಬರೆದಿರಲಾಗಿದೆಯೋ ಅಲ್ಲೇ ಕಸದ ರಾಶಿಯನ್ನು ಬಿಸುಟಿರುತ್ತಾರೆ, ಎಲ್ಲಿ ಮೂತ್ರ ಮಾಡಬೇಡಿ ಎಂದು ಬರೆದಿರಲಾಗುತ್ತದೋ ಅಲ್ಲೇ ಪ್ಯಾಂಟ್​ ಜಾರಿಸಿ, ಜಲಧಾರೆಯನ್ನು ಮಾಡುತ್ತಿರುತ್ತಾರೆ. ಇನ್ನು ಈ ಹೆಣ್ಮಕ್ಕಳಂತೂ ಬೆಳಗ್ಗೆ ಬೆಳಗ್ಗೆ ತಮ್ಮ ವಿರಾಟ್​ರೂಪವನ್ನು ತೋರಿಸುತ್ತಲೇ ಇರುತ್ತಾರಪ್ಪಾ..
ಒಟ್ಟಿನಲ್ಲಿ ಹೇಳಹೊರಟರೆ, ಬೇಕಾದ ಕೆಲಸವನ್ನು ಬಿಟ್ಟು ಬೇಡದ ಕೆಲಸವನ್ನೇ ಹೆಚ್ಚಾಗಿ ಮಾಡುತ್ತಲಿರುತ್ತಾರೆ… ಕೆಲವೊಂದು ಬಾರಿ ಕೆಲೊಂದು ಪ್ರದೇಶವನ್ನು ನೋಡಿದಾಗಲಂತೂ  ಹಸಿರು ತುಂಬಿದ ನಮ್ಮ ಹಳ್ಳಿಯಲ್ಲಿ ಗಂಜಿಯುಂಡರೂ ಪರವಾಗಿಲ್ಲ ಹಳ್ಳಿಯೇ ಹಿತವೆಂದೆನಿಸುತ್ತದೆ... ಶುದ್ಧ ನೀರು ಶುದ್ಧ ಗಾಳಿ ಜೊತೆಯಲ್ಲಿ ಕಲುಷಿತವಿಲ್ಲದ ಆಹಾರವನ್ನು ನಾವು ಸೇವಿಸಬಹುದಲ್ಲಾ ಎಂದೆನಿಸುತ್ತದೆ.. ಜೊತೆಯಲ್ಲಿ  ಮಳೆಗಾಲದ ಮಳೆಯನ್ನು ಆಸ್ವಾದಿಸುತ್ತಾ, ಬೇಸಿಗೆಯ ಶೆಖೆಗೆ ಬೆಂದರೂ ತೋಟದ ನಡುವೆ ಹಾಯಾಗಿ ಆರಾಮವಾಗುತ್ತಾ ನಮ್ಮ ಜೀವಿತಾವಧಿಯನ್ನು ಆರಾಮವಾಗಿ ಕಳೆಯಬಹುದಲ್ಲಾ ಎಂಬುವುದೇ ಖುಷಿಯ ಸಂಗಗತಿ ಅಲ್ವಾ,,,,,
          ಈ ಲೇಖನದ ಉದ್ದೇಶ ಇಷ್ಟೇ ಇನ್ನಾದರೂ ನೀವು ಪೇಟೆಯ ವ್ಯಾಮೋಹ ಬಿಟ್ಟು , ಹಳ್ಳಿಯತ್ತ ಮುಖಮಾಡಿ, ನಮ್ಮ ಪಾರಂಪರಿಕ ಕೃಷಿ ಮತ್ತೆ ಉತ್ತುಂಗಕ್ಕೇರಲಿ ಖುಷಿಯಿಂದ ಬಾಳೋಣ ಅಷ್ಟೇ…

ಪ್ರೀತಿಯಿಂದ
ಅಕ್ಷಯ್​

Tuesday, 12 November 2019

ಒಂದು ಜೀನ್ಸ್ ಪ್ಯಾಂಟಿನ ಕಥೆ…

ಇದೊಂದು ಪಕ್ಕಾ ಹಳ್ಳಿ ಹುಡುಗನ ಕಥೆ, ಒಬ್ಬ ಹಳ್ಳಿ ಹುಡುಗ, ಅಂದ್ರೆ ಕೂಪ ಮಂಡೂಕ ಸಿಟಿ ಎಂಬ ಸಮುದ್ರದೊಳಗೆ ಧೂಮುಕಿ ಮುಂದೇನಾಗುತ್ತೆ ಎನ್ನೊ ಒಂದು ಹಾಸ್ಯಮಯ ಕಥೆ…

 ಆ ಹುಡುಗನ ಹೆಸರು ಬೇಡ ಬಿಡಿ.. ಯಾಕ್ ಸುಮ್ನೆ .. ಆದ್ರೆ ಪಕ್ಕಾ ಹಳ್ಳಿ ಹುಡುಗ ತನ್ನ ಪ್ರಾರ್ಥಮಿಕ ವಿದ್ಯಾಭ್ಯಾಸವನ್ನೆಲ್ಲಾ ಒಂದು ಪ್ರತಿಷ್ಟಿತ ಶಾಲೆಯಲ್ಲಿ ಮುಗಿಸಿದ್ದರೂ ಆತನಿಗೆ ಗುಣಾಕಾರ ಭಾಗಾಕಾರ ಲೆಕ್ಕ ಕಬ್ಬಿಣದ ಕಡಲೇಕಾಯಿಯೇ ಸರಿ.. ಅಷ್ಟೇ ಯಾಕೆ ಸಮಾಜ ಮತ್ತುಯ ಕನ್ನಡ ವಿಷಯ ಬಿಟ್ರೆ ಬೇರಾವ ವಿಷಯಗಳು ಅವನ ತಲೆಗೆ ಹತ್ತುತ್ತಿರಲಿಲ್ಲವಂತೆ…ಈ ಹಳ್ಳಿ ಗಮಾರನನ್ನು ಹೇಗಾದರೂ ಮಾಡಿ ಉದ್ಧಾರ ಮಾಡಿಯೇ ತೀರುವೆ ಎಂದು ಪಣತೊಟ್ಟ ಆತನ ಅತ್ತೆ ಆತನನ್ನು ಆ ಹಳ್ಳಿಯಿಂದ ಬಿಡಿಸಿ ಸುಮಾರು 75 ಕಿ.ಮಿ ದೂರದ ಮಂಗಳೂರಿಗೆ ಕರೆದುಕೊಂಡು ಬಂದರು, ಆದ್ರೆ ಈ ಪುಣ್ಯಾತ್ಮ ಅಟ್ಲೀಸ್ಟ್ ಅತ್ತೆಯ ಮರ್ಯಾದೆ ಉಳಿಸೋಕಾದ್ರೂ ಚೆನ್ನಾಗಿ ಕಲಿಬೇಕಲ್ವಾ??? ಊಹುಂ ಕಲೀಲೇ ಇಲ್ಲ.. ಆದ್ರೆ ಆ ಅತ್ತೆಗೆ ಒಬ್ಬ ಮಗನಿದ್ದ ಆ ಪುಣ್ಯಾತ ಆ ಸಮಯದಲ್ಲಿ ರಾಕ್ಷಸನಂತೆ ಕಂಡರೂ ಬಳಿಕ ಆತ ದೇವಮಾನವನಾದ..
ಅದೆಲ್ಲಾ ಇರ್ಲಿ ಈಗ ಜೀನ್ಸ್ ಪ್ಯಾಂಟಿನ ಕಥೆ ಹೇಳೊಕೆ ಹೊರಟ ಈ ಪುಣ್ಯಾತ್ಮ ಕಥೆನ ಬೇರೆ ಕಡೆ ಡೈವರ್ಟ್ ಮಾಡ್ತಾ ಇದಾನೆ ಅಂತ ಮನಸ್ಸಲ್ಲೇ ಬೈಕೋಬೇಡಿ, ವಿಷ್ಯ ಇರೋದೇ ಈ ಪೀಠಿಕೆಯಲ್ಲಿಉ ರೀ.. ಆತ ಹೊಸ ಶಾಲೆಎ ಏನೋ ಸೇರ್ಕೊಂಡಿದ್ದಾಯ್ತು, ಸದ್ಯಕ್ಕೆ ಆತನ ಉನಿಫಾರ್ಮ್ ಹೊಲಿಸ್ಕೊಂಡು ಕೋಲೆ ಬಸವನ ಥರ ಶಾಲೆಗೆ ಹೊಗ್ಬರ್ತಿದ್ದ.. ಹೋದ ಪುಟ್ಟ ಬಂದ ಪುಟ್ಟ ಎಂಬ ಗಾದೆಯ ಥರಹ ಶಾಲೆಗೆ ಹೋಗೊದು ಟೀಚರ್ ಹೇಳೋ ಪಾಠ ಕೇಳೋದು ವಾಪಾಸ್ ಮನೆಗೆ ಬರೋದು ಅಷ್ಟೇ ಅವನ ದಿನಚರಿ, ಹೀಗೆ ದಿನ ಸಾಗಿರಲು ಒಂದು ದಿನ ಅವನ ಸ್ಕೂಲ್ನಲ್ಲಿ ಮೊದಲ ಫಂಕ್ಷನ್ ಹೆಡ್ಮಿಸ್ಟ್ರೆಸ್ಸು ಬಂದು ನಾಳೆ ಎಲ್ರೂ ಕಲರ್ ಡ್ರೆಸ್ ಹಾಕೊಂಡು ಬರ್ಬೋದು ಅಂತ ಅನೌಂನ್ಸ್ ಮಾಡೇ ಬಿಟ್ರು.. ಅಯ್ಯಾ ನಮ್ ಹೀರೋಗೂ ಅಷ್ಟೇ ಬೇಕಿತ್ತೇನೋ, ಪುಣ್ಯಾತ್ಮ  ತನ್ನ ಫ್ರೆಂಡ್ಸ್ ಹತ್ರ ಬಡಾಯ ಕೊಚ್ಚಕೊಳೋಕೆ ಶುರು ಮಾಡ್ಕೊಂಡು ಬಿಟ್ಟಿದ್ದ, ನಾಳೆ ನಾನು ಸ್ಟೈಲ್ ಜೀನ್ಸ್ ಪ್ಯಾಂಟ್ ಹಾಕೋಂಡು ಬರ್ತೀನಿ ನೋಡ್ತಿರಿ ಅಂತ… ಅಯ್ಯೋ ದೇವಾ ಈ ಮಾತು ಹೇಳೋಕು ಮೊದ್ಲು ಅವನಿಗೆ ಜೀನ್ಸ್ ಪ್ಯಾಂಟ್ ಎಲ್ಲಿ ಸಿಕ್ತು ಅಂತ ಹೇಳೇ ಇಲ್ವಲ್ಲ..  ವಿಷ್ಯ ಇಷ್ಟೇ ಕಣ್ರೀ ಅವನ ಅಣ್ಣ  ಇದ್ದ ಅಂದಿದ್ನಲ್ಲ ಅದೇ ಆ ಹಳೇ ರಾಕ್ಷನ ಅವನ ಸೊಂಟಕ್ಕೆ ಚಿಕ್ಕದಾಗುವ ಪ್ಯಾಂಟೊಂದನ್ನು ಇವನಿಗೆ ಹಾಕೋಳೋಕೆ ಕೊಟ್ಟಿದ್ರು, ಆದ್ರೆ ಆ ಪ್ಯಾಂಟಿನ ಝಿಪ್ ಮಾತ್ರ ಹಾಳಾಗ್ ಹೋಗಿತ್ತು.  ಅದೇ ಪ್ಯಾಂಟ್ನ ಧೈರ್ಯದಲ್ಲಿ ಇವನು ಫ್ರೆಂಡ್ಸ್ ಮುಂದೆ ಬಡಾಯಿ ಕೊಚ್ಚಿಕೊಂಡು ಬಿಟ್ಟಿದ್ದ ಅಷ್ಟೇ.. ಆಲ್ ರೈಟ್ ಈಗ ಮುಂದಕ್ ಹೋಗಣ…
 ಅಂತೂ ಇಂತೂ ಫಂಕ್ಷನ್ ದಿನ ಬಂದೇ ಬಿಡ್ತು, ಇವನೂ ಕೂಡಾ ಅದೇ ಝಿಪ್ ಇಲ್ದಿರೋ ಪ್ಯಾಂಟ್ ಹಾಕೊಂಡು ಶಾಲೆಗೆ ನಾನೇ ಹೀರೋ ಅನ್ನೋ ರೇಂಜಿಗೆ ಎಂಟ್ರಿ ಕೊಟ್ಟಿದ್ದ, ಅಯ್ಯೋ ಶಿವನೇ ಈ ಹುಡುಗನ ಗ್ರಹಚಾರ ಕೆಟ್ಟೋಗಿತ್ತೋ ಏನೋ.. ಅವನ ಫ್ರೆಂಡ್ಸ್ ಬಂದು ಅವನ ಪ್ಯಾಂಟ್ ಝಿಪ್ ನೋಡಿ ಘೋಳ್ಳಂತ ನಕ್ಕು ಬಿಡೋದಾ???? ಛೇಛೇಛೇ … ಅಲ್ಲ ಮಾರಾಯಾ ಈ ಹರ್ದೋಗಿರೋ ಝಿಪ್ ಇಲ್ದೇ ಇರೋ ಜೀನ್ಸ್ ಪ್ಯಾಂಟ್ ನಂಬಿ ನೀನು ನಮ್ಮ ಮುಂದೆ ಬಿಲ್ಡಪ್ ಕೊಟ್ಯಾ ಅಂತ ಕೇಳಿದ್ದ.. ಅಷ್ಟೇ ಅಲ್ಲ ಅಕ್ಕ ಪಕ್ಕದಲ್ಲಿರೋ ಹುಡ್ಗೀರಿಗೂ ಅವನ ಈ ಜೀನ್ಸ್ ಪುರಾಣವನ್ನು ಬಿಚ್ಚಿಟ್ಟಿದ್ದ. ಶಿವನೇ ಶಂಭುಲಿಂಗ ಎಂದು ಪಾಪ ಆ ಹುಡುಗ ಇಡೀ ದಿನ ಮನಸಾರೆ ಅತ್ತು ಬಿಟ್ಟಿದ್ದ, ಇನ್ನು ಮುಂದೆ ಪ್ಯಾಂಟ್ ಹಾಕಿಲ್ಲ ಅಂದ್ರೂ ಪರ್ವಾಗಿಲ್ಲ, ಬಟ್ ಝಿಪ್ ಇಲ್ದೇ ಇರೋ ಪ್ಯಾಂಟ್ ಅಂತೂ ಹಾಕಲ್ಲ ಅಂತ ಪ್ರಮಾಣ ಮಾಡ್ಕೊಂಡ್ ಬಿಟ್ಟ ಪಾಪ,,,

ಹಾಸ್ಯ ಏನೇ ಇರ್ಲಿ ರೀ. ಆದ್ರೆ ಈ ಕಥೆಯ ಹಿಂದೆ ಎರಡು ನೀತಿ ಅಡಗಿದೆ ಕಣ್ರೀ..
ಒಂದು : ವಿಷಯದ ಬಗ್ಗೆ ಅರಿವಿಲ್ಲದೇ ನಾವು ಯಾವತ್ತೂ ಬಡೆಆಯಿ ಕೊಚ್ಕೋಬಾರ್ದು
ಎರಡು : ಏನೇ ಇರ್ಲಿ ಬಡಪಾಯಿ ಜೀವಿಗಳ ಬಗ್ಗೆ ನಾವು ಯಾವತ್ತೂ ಹಾಸ್ಯ ಮಾಡ್ಬಾರ್ದು…

ಅಂದ ಹಾಗೆ ಈ ಕಥೆ ಯ ಕಥಾನಾಯಕ ಯಾರು ಅಂತೀರಾ????????
ಹಿ ಇಸ್ ನನ್ ಅಥರ್ ಥೆನ್ …. ಅಕ್ಷಯ್ ಹೂ ಇಸ್ ಎ ಜರ್ನಲಿಸ್ಟ್ ನೌ

ಪ್ರೀತಿ.. ಪ್ರೇಮ... ಮನೊಕಾಮನೆ..... ಒಂದು ಜೋಡಿಯ ಸುತ್ತ...!

ಅನೇಕ ವರ್ಷಗಳ ಕಾಲ ಬರವಣಿಗೆಯಿಂದ ವಿಮುಖನಾಗಿದ್ದೆ ಆದ್ರೆ ಈಗ ಅದ್ಯಾಕೋ ಬರೆಯಬೇಕು ಅನ್ನಿಸಿತ್ತು ಅದೊಂದು ಕಥೆ... ನನ್ನ ಕಥೆಯಲ್ಲ.. ನಾ ಕೇಳಿದ ಪ್ರೀತಿಯ ಕಥೆ... ...