ಬೆಂಗಳೂರು : ಹೆಸರು
ಕೇಳಿದೊಡನೆ ನಮ್ಮ ಕಲ್ಪನಾ ಲೋಕದಲ್ಲಿ ಅನೆಕಾನೇಕ ಚಿತ್ರವಿಚಿತ್ರ ವಿಚಾರಗಳು ಹರಿದಾಡಲು ಪ್ರಾರಂಭವಾಗುತ್ತದೆ, ಸಾಲು ಸಾಲು ಗಗನಚುಂಬಿ ಕಟ್ಟಡಗಳು, ವಿಧಾನಸೌಧ , ಹೈಕೋರ್ಟ್
, ಅದರ ಮುಂಭಾಗದಲ್ಲಿ ಇರುವ ಕಬ್ಬನ್ ಪಾಕ್ , ಲಾಲ್ಭಾಗ್ ಮುಂತಧ ಕಲ್ಪನೆಗಳು ಮನಃಪಲ್ಲಟದಲ್ಲಿ
ಮೂಡಿ ಮರೆಯಾಗುತ್ತದೆ. ಆದ್ರೆಆ ಪ್ರದೇಶದ ಗಲ್ಲಿ ಗಲ್ಲಿಗಳಲ್ಲಿ ಒಂದೆರಡು ದಿನ ಅಲೆದಾಡಿ ನೋಡಿ ನಾ
ಕಲ್ಪಿಸಿಕೊಂಡ ಬೆಂಗಳೂರು ಇದೇನಾ ಎಂದು ನೀವು ಬೆರಳಿನ ಮೇಲೆ ಕೈ ಇಟ್ಟುಕೊಳ್ಳುವಿರೇನೋ…
ಹೌದು ಬೆಂಗಳೂರು ಅದಂದು ಹೆಸರಲ್ಲ.. ಭಾರತದ ಐಟಿ ಹಬ್
ಎಂದೇ ಕರೆಯಲ್ಪಡುವ ಕರ್ನಾಟಕದ ರಾಜಧಾನಿ, ಅನೇಕ ಸ್ಟಾರ್ಟಪ್ ಕಂಪೆನಿಗಳಿಗೆ ತಾಯಿಯಂತೆ ತನ್ನೊಡಲನ್ನು
ನೀಡಿದ ಜಾಗವದು, ಸಾಧನೆ ಮಾಡಬೇಕು ಎಂದು ಆಗಮಿಸುವ ಕೆಲವರಿಗೆ ಸಿಹಿ ನನಿಡಿದ್ದರೆ ಇನ್ನು ಕೆಲವರಿಗೆ
ಕಹಿಯುಣಿಸಿ ಪಾಠ ಕಲಿಸಿದ ದೇವತೆ.. ಆದ್ರೆ ಅದೊಂದು ದೊಡ್ಡ ಪಟ್ಟಣವಲ್ಲ, ಬದಲಾಗಿ ಅದೊಂದು ಹಾಳು ಕೊಂಪೆಯೆಂಬ
ಹಳ್ಳಿ ಎಂದರೆ ಸೂಕ್ತ ಎನ್ನುವುದು ನನ್ನ ಭಾವನೆ ,
ಯಾಕೆ ಅಂತೀರಾ?? ಬನ್ನಿ ಮಾತಾಡೋಣ..
ಬೆಂಗಳೂರು ನಗರ ಎಲ್ಲಾ ರೀತಿಯ ಮೂಲಸೌಕರ್ಯ ಹೊಂದಿದ್ದರೂ
ಯಾವುದೇ ಮೂಲಸೌಕರ್ಯವಿಲ್ಲದ ಹಳ್ಳಿಗೂ ಕಡೆ ಎಂದು ಹೇಳಬೇಕು, ಊರಿನ ನಡುವೆ ಹರಿಯುವನ ಕೊಳಚೆ ಕಾಲುವೆಗಳು,
ಅಲ್ಲಲ್ಲಿ ಕೈಗಾಡಿಗಳಲ್ಲಿ ಸೊಪ್ಪು, ಪ್ಲಾಸ್ಟಿಕ್, ಹಣ್ಣುಗಳನ್ನು ಮಾರುತ್ತಲಿರುವ ಜನರು, ರಸ್ತೆ
ಬದಿಯಲ್ಲಿ ಎಲ್ಲೆಂದರಲ್ಲಿ ನಾರುವ ಕಸದ ರಾಶಿಗಳು, ಅಲ್ಲಲ್ಲಿ ಅಲೆದಾಡುತ್ತಾ ಒಳಿದಿರುವ ಅಲ್ಪಸ್ವಲ್ಪ
ಹಸಿರನ್ನು ಸೇವಿಸುತ್ತಿರುವ ಅಲೆಮಾರಿ ದನಗಳು,. ಬೆಳಗ್ಗೆದ್ದು ರಾಕ್ಷಸರಂತೆ ಕೂದಲು ಹರವಿಕೊಂಡು ಕುಳಿತಿರುವ
ಆಂಟಿ ಮಣೀಯರು, ಇವೆಲ್ಲವನ್ನು ನೋಡುತ್ತಿದ್ದರೆ ಮೂಲಸೌಕರ್ಯವಿಲ್ಲದೆ ಬಿದ್ದಿರುವ ಹಳ್ಳಿಗಳಂತೆ ಭಾಸವಾಗುತ್ತದೆ.
ಅದೇಕೋ ಏನೋ ಬೆಂಗಳೂರಿನ ಕೆಲವ ಏರಿಯಾಗಳನ್ನು ನೋಡಿದರೆ ಇದ್ಯಾವ್ದಪ್ಪಾ ಹಾಳು ಕೊಂಪೆ ಎಂದು ನಿಮ್ಮ
ಮೂಗಿನ ಮೇಲೆ ನೀವೇ ಕೈ ಇಟ್ಟುಕೊಳ್ಳುವಿರೇನೋ..
ಹೌದು ಬೆಂಗಳುರಿನ
ಕೆಲವು ಜನರು ಅಲ್ಲ‘ಲ್ಲ. ಬಹುತೇಕ ಜನರು ಇಂದು ನೈತಿಕತೆ ಇಲ್ಲದೇ ಬದುಕುತ್ತಿದ್ದಾರೆ ಎಂದು ಭಾಸವಾಗುತ್ತದೆ.
ಎಲ್ಲಿ ಕಸ ಬಿಸಾಡಬೇಡಿ ಎಂದು ಬರೆದಿರಲಾಗಿದೆಯೋ ಅಲ್ಲೇ ಕಸದ ರಾಶಿಯನ್ನು ಬಿಸುಟಿರುತ್ತಾರೆ, ಎಲ್ಲಿ
ಮೂತ್ರ ಮಾಡಬೇಡಿ ಎಂದು ಬರೆದಿರಲಾಗುತ್ತದೋ ಅಲ್ಲೇ ಪ್ಯಾಂಟ್ ಜಾರಿಸಿ, ಜಲಧಾರೆಯನ್ನು ಮಾಡುತ್ತಿರುತ್ತಾರೆ.
ಇನ್ನು ಈ ಹೆಣ್ಮಕ್ಕಳಂತೂ ಬೆಳಗ್ಗೆ ಬೆಳಗ್ಗೆ ತಮ್ಮ ವಿರಾಟ್ರೂಪವನ್ನು ತೋರಿಸುತ್ತಲೇ ಇರುತ್ತಾರಪ್ಪಾ..
ಒಟ್ಟಿನಲ್ಲಿ ಹೇಳಹೊರಟರೆ,
ಬೇಕಾದ ಕೆಲಸವನ್ನು ಬಿಟ್ಟು ಬೇಡದ ಕೆಲಸವನ್ನೇ ಹೆಚ್ಚಾಗಿ ಮಾಡುತ್ತಲಿರುತ್ತಾರೆ… ಕೆಲವೊಂದು ಬಾರಿ
ಕೆಲೊಂದು ಪ್ರದೇಶವನ್ನು ನೋಡಿದಾಗಲಂತೂ ಹಸಿರು ತುಂಬಿದ
ನಮ್ಮ ಹಳ್ಳಿಯಲ್ಲಿ ಗಂಜಿಯುಂಡರೂ ಪರವಾಗಿಲ್ಲ ಹಳ್ಳಿಯೇ ಹಿತವೆಂದೆನಿಸುತ್ತದೆ... ಶುದ್ಧ ನೀರು ಶುದ್ಧ
ಗಾಳಿ ಜೊತೆಯಲ್ಲಿ ಕಲುಷಿತವಿಲ್ಲದ ಆಹಾರವನ್ನು ನಾವು ಸೇವಿಸಬಹುದಲ್ಲಾ ಎಂದೆನಿಸುತ್ತದೆ.. ಜೊತೆಯಲ್ಲಿ
ಮಳೆಗಾಲದ ಮಳೆಯನ್ನು ಆಸ್ವಾದಿಸುತ್ತಾ, ಬೇಸಿಗೆಯ ಶೆಖೆಗೆ
ಬೆಂದರೂ ತೋಟದ ನಡುವೆ ಹಾಯಾಗಿ ಆರಾಮವಾಗುತ್ತಾ ನಮ್ಮ ಜೀವಿತಾವಧಿಯನ್ನು ಆರಾಮವಾಗಿ ಕಳೆಯಬಹುದಲ್ಲಾ
ಎಂಬುವುದೇ ಖುಷಿಯ ಸಂಗಗತಿ ಅಲ್ವಾ,,,,,
ಈ ಲೇಖನದ ಉದ್ದೇಶ ಇಷ್ಟೇ ಇನ್ನಾದರೂ ನೀವು ಪೇಟೆಯ
ವ್ಯಾಮೋಹ ಬಿಟ್ಟು , ಹಳ್ಳಿಯತ್ತ ಮುಖಮಾಡಿ, ನಮ್ಮ ಪಾರಂಪರಿಕ ಕೃಷಿ ಮತ್ತೆ ಉತ್ತುಂಗಕ್ಕೇರಲಿ ಖುಷಿಯಿಂದ
ಬಾಳೋಣ ಅಷ್ಟೇ…
ಪ್ರೀತಿಯಿಂದ
ಅಕ್ಷಯ್


No comments:
Post a Comment