Wednesday, 7 October 2020

ಬೆಂಗಳೂರಲ್ಲೊಬ್ಬ ಮಿತ್ರದ್ರೋಹಿ

 


ಬೆಂಗಳೂರಿನ ಕಾಂಕ್ರೀಟ್ ಕಾಡುಗಳ ನಡುವೆ ಅಂದು ಎಂದಿಂತೆ ಬೆಳಗಾಗಿತ್ತು, ಎದ್ದು ತನ್ನೆಲ್ಲಾ ಕೆಲಸಗಳನ್ನು ಮುಗಿಸಿದ ಮೌನಿಯು, ಇನ್ನೇನು ಸ್ನಾನಕ್ಕೆ ನೀರು ಬಿಸಿ ಮಾಡಹೊರಟಿದ್ದ ಅಷ್ಟರಲ್ಲೇ ಆತನ ಮೊಬೈಲ್ ಗುಂಯ್‌ಗುಡುತ್ತಿತ್ತು. ಮಬೈಲ್ ಕೈಗೆತ್ತಿಕೊಂಡು ಹಲೋ ಅಂದಾಗ ಅತ್ತ ಕಡೆಯಿಂದ ಹಲೋ ಮೌನಿ ನಾನು ಆದಿ ಕಣೋ, ಅದೇ ನಿನ್ನ ರೂಂ ಮೇಟ್ ನ ಫ್ರೆಂಡ್, ನಾನು ಬೆಂಗಳೂರಿಗೆ ಬಂದಿದ್ದೇನೆ ಕಣೋ , ನಿನ್ ರೂಂ ಮೇಟ್ ಗೂ ಹೇಳಿದಿನಿ ಒಂದು ದಿನ ರೂಂ ನಲ್ಲಿ ಇರುತ್ತೇನೆ ದಯವಿಟ್ಟು ಅವಕಾಶ ಮಾಡಿಕೊಡೋ ಅಂದ, ಸರಿನಪ್ಪಾ.. ಎಂದು ಹೇಳಿ ನಾನು ಫೋನ್ ಇಟ್ಟು, ಸ್ನಾನಕ್ಕೆ ಅಣಿಯಾದೆ, ಸ್ನಾನ ಮುಗಿಸಿ ಬಳಿಕ ಕೀಯನ್ನು ಕಿಟಕಿಯ ಬಳಿ ಇಟ್ಟು ಆಫೀಸಿಗೆ ಹೊರಟೆ.

ಆಫೀಸಿನಲ್ಲಿ ಕೆಲಸದ ಒತ್ತಡಗಳ ನಡುವೆ ಮುಳುಗಿದ್ದಾಗಲೇ ಮತ್ತೊಮ್ಮೆ ಫೋನ್ ರಿಂಗಣಿಸಿತು, ಹಲೋ ಮೌನಿ ನಾನು ಆದಿ ಎನ್ನುವ ಅತ್ತ ಕಡೆಯ ದನಿ, ಹಾ ಹೇಳಪ್ಪಾ ಎಂದು ನಾನು ಮಾತು ಮುಂದುವರೆಸಿದೆ. ಲೋ ರೂಂ ಕೀಎಲ್ಲಿಟ್ಟಿದ್ದೀಯಾ ಎಂದು ಕೇಳಿದ್ದಕ್ಕೆ ಅಲ್ಲೇ ಕಿಟಕಿಯ ಬಳಿಯಲ್ಲಿ ಇಟ್ಟಿದ್ದೇನೆ ನೋಡು ಎಂದೆ. ಆಯ್ತು ಎಂದು ಫೋನ್ ಇಟ್ಟ. ನಾನು ನನ್ನ ಕೆಲಸಗಳಲ್ಲಿ ಬಿಝಿಯಾಗಿಬಿಟ್ಟೆ.


ಸಂಜೆ ಕೆಲಸ ಮುಗಿಸಿ ಆಫೀಸ್ ಬಳಿ ಒಂದು ಭೇಲ್ ಪುರಿ ತಿಂದು, ರೂಂ ಕಡೆ ಹೊರಟೆ. ರೂಂ ತಲುಪಿ ಆದಿಯನ್ನು ಮಾತನಾಡಿಸುತ್ತಾ, ಊಟವಾಯಿತೇ ಎಂದು ಕೇಳಿದೆ. ಅದಕ್ಕಾತ ಇಲ್ಲ ಕಾಸಿರಲಿಲ್ಲ ಎಂದ. ಕೂಡಲೇ ಅಯ್ಯೋ ಎಂದೆನಿಸಿತು, ಒಂದೈವತ್ತು ರುಪಾಯಿಗಳನ್ನು ಕೊಟ್ಟು ಆತನಿಗೆ ಊಟಮಾಡಲು ಹೇಳಿದೆ. ಬಳಿಕ ನನ್ನ ಮನದರಸಿಗೆ ಕೆಲ ಕಾಲ ಮೆಸೇಜಿಸಿ ಮಲಗಿ ಬಿಟ್ಟೆ,

ಮರುದಿನ ಮತ್ತದೇ ಕಾರ್ಯ... ಬೆಳಗ್ಗೆ ಎದ್ದು ನನ್ನ ದೈನಂದಿನ ಕಾರ್ಯ ಮುಗಿಸಿ ಆಫೀಸಿಗೆಂದು ಹೊರಟೆ.. ಆದಿ ಇನ್ನೂ ಎದ್ದಿರಲಿಲ್ಲ, ನಾನು ಆಫೀಸಿಗೆ ಹೋಗಿ ಸಂಜೆ ಬರುತ್ತೇನೆಂದು ಆತನಿಗೆ  ಹೇಳಿ ಹೊರಟೆ...

ಆಫೀಸಿಗೆ ಕೊಂಚ ಬೇಗನೇ ಬಂದ ನಾನು ಆಫೀಸಿನ ಕಾರ್ಯಗಳಲ್ಲಿ ಬ್ಯಸಿಯಾದೆ, ಅಂದು ಸ್ವಲ್ಪ ಹೆಚ್ಚೇ ಕೆಲಸದ ಒತ್ತಡವಿದ್ದುದರಿಂದ ನನಗೆ ರೂಮಿಗೆ ಹೋಗುವುದು ಕೊಂಚ ತಡವಾಗಿತ್ತು. ಅದಾಗಲೆ ಸಮಯ ರಾತ್ರಿ ೧೦ ಆಗಿತ್ತು , ರೂಮಿನತ್ತ ನಡೆದ ನನಗೆ ಒಂದು ದೊಡ್ಡ ಆಶ್ಚರ್ಯವೇ ಕಾದಿತ್ತು ,ಅಯ್ಯಾ ಬಾಗಿಲು ತೆರೆದೇ ಇದೆ, ಲೈಟುಗಳು ಆನ್ ಇದೆ, ನನ್ನ ರೂಂ ಮೇಟ್ ನ ಗೆಳೆಯನ ಪತ್ತೆಯೇ ಇಲ್ಲ.. ಕೊಂಚ ಹೊತ್ತು ಕಾದ ಬಳಿಕ ಅತ್ತಿತ್ತ ನೋಡಿದರೆ ನನ್ನ ಎರಡು ಅಂಗಿಗಳು ಕಾಣುತ್ತಿಲ್ಲ, ರೂಂ ಮೇಟ್ ನ ಸೂಟ್‌ಕೇಸ್ ಕಾಣುತ್ತಿಲ್ಲ, ವಾಟರ್ ಹೀಟರ್ ಹಾಗೂ ಪಾತ್ರೆಗಳೆಲ್ಲವೂ ನಾಪತ್ತೆ. ನೊಡಿ ಶಾಕ್ ಆಯಿತಾದರೂ ರೂಂ ಮೇಟ್  ಗೂ ಹಾಗೂ ಆತನ ಗೆಳೆಯನಿಗೂ ಫೋನಾಯಿಸಿದರೆ, ರೂಂ ಮೇಟ್ ಗೆ ಆತ ಬಂದಿರುವ ವಿಚಾರವೇ ಗೊತ್ತಿಲ್ಲ,  ಆದಿಗೆ ಫೋನಾಯಿಸಿದರೆ ಆತ ಕರೆ ಸ್ವೀಕರಿಸುತ್ತಿಲ್ಲ. ಅಲ್ಲಿಗೆ ಅರ್ಥವಾಯಿತು ಆದಿ ಕಳ್ಳತನದ ಉದ್ದೇಶದಿಂದಲೇ ರೂಮಿಗೆ ಬಂದಿದ್ದ ಎಂದು, ಇನ್ನು ಮಾತನಾಡಿ ಏನು ಪ್ರಯೋಜನ ಎಂದು ತೆಪ್ಪಗೆ ಮಲಗಿದೆ..



Thursday, 13 February 2020

ಇಷ್ಟೇ ರೀ… ಪತ್ರಕರ್ತನ ಬಾಳು..


ಪತ್ರಕರ್ತ ಈ  ಪದ ಕೇಳಿದ ತಕ್ಷಣ ಅನೇಕಾನೇಕ ಜನರಲ್ಲಿ ಮೂಡುವ ಒಂದೇ ಭಾವನೆ ಒಂದೇ .. ಪತ್ರಕರ್ತ ಅಂದ್ರೆ ಅವ್ನ ಹತ್ರ ತುಂಬಾ ಕಾಸಿರುತ್ತೆ ಒಂದು ನ್ಯೂಸ್ ಮಾಡಿದ್ರೆ ಅವ್ನಿಗೆ ಬೇಕಾದಷ್ಟು ಕಾಸ್​ ಬರುತ್ತೆ  ಅಂತೆಲ್ಲಾ ಆಲೋಚನೆ ಬರೋದು ಸರ್ವೇ ಸಾಮಾನ್ಯ ! ಆದ್ರೆ ನಿಜ ಜೀವನದಲ್ಲಿ ಪತ್ರಕರ್ತ ಪಡುವ ಬವಣೆಗಳನ್ನು ಯಾರಾದ್ರ ನೋಡಿದ್ರೆ ಇದೇನಾ ಪತ್ರಕರ್ತನ ಜೀವನ ಅಂತ ಬಾಯಿ ಮೇಲೆ ಬೆರಳಿಟ್ಟುಕೊಳ್ಳದೇ ಇರಲ್ಲ…


  ಪತ್ರಕರ್ತ ಈ ಒಂದು ಪದಕ್ಕೆ ಸಾವಿರಾರು ಮನಸ್ಸುಗಳಲ್ಲಿ ಸಾವಿರಾರು ಅರ್ಥಗಳಿರುತ್ತದೆ. ಆದ್ರೆ ನಿಜವಾಗಿಯೂ ನೋಡಹೊರಟರೆ ಪತ್ರಕರ್ತ ಅನುಭವಿಸುವ ಕಷ್ಟಗಳನ್ನು ಇನ್ನೊಬ್ಬ ಪತ್ರಕರ್ತ ಮಾತ್ರ ಅರ್ಥ ಮಾಡಿಕೊಳ್ಳಲು ಸಾಧ್ಯ ! ಯಅಕೆ ಅಂತೀರಾ ಮುಂದೆ ಓದಿ…
ಈ ಲೇಖನ ಪ್ರಾರಂಭ ಮಾಡೋದಕ್ಕೂ ಮುನ್ನ ಒಂದು ಕಥೆ ಹೇಳ್ತೀನಿ ಕೇಳಿ..
ಒಂದೂರಲ್ಲಿ ಇಬ್ರು ಸ್ನೇಹಿತರು ಇರ್ತಾರೆ.. ಆ ಇಬ್ರಲ್ಲಿ ಒಬ್ಬ ಪತ್ರಕರ್ತ ಇನ್ನೊಬ್ಬ ವ್ಯಾಪಾರಿ… ಇವ್ರಿಬ್ರು ಎಷ್ಟು ಒಳ್ಳೆ ಫ್ರೆಂಡ್ಸ್​ ಅಂದ್ರೆ ಇಬ್ರು ಯಾವಾಗ್ಲೂ ಜೋತೆಲೇ ಇರ್ತಿದ್ರು.. ಒಂದು ದಿನ ಈ ಪತ್ರಕರ್ತನ ಸ್ನೇಹಿತ ಏನೋ ಭೀಕರ ರಸ್ತೆ ಅಪಘಾತದಲ್ಲಿ ತೀರ್ಕೊಂಡು ಬಿಡ್ತಾನೆ .. .. ಆದೇ ಸಮಯಕ್ಕೆ ಪತ್ರಕರ್ತನಿಗೆ ಹೆಡ್​ ಆಫಿಸಿಂದ ಈ ಅಪಘಾತದ ಬಗ್ಗೆ ಒಂದು ವರದಿ ಮಾಡ್ಬೇಕು ಕೂಡ್ಲೇ ಹೋಗು ಅಂತ ಹೇಳಿ ಬಿಡ್ತಾರೆ.. ಇಷ್ಟೇ ಕಥೆ ಪತ್ರಕರ್ತ ಅಲ್ಲಿ ತನ್ನ ಗೆಳೆಯನ ಸಾವಿಗೆ ಮರುಗೋದಾ ಅಥವಾ ತನ್ನ ವೃತ್ತಿ ಮಾಡೋದಾ ? ಇಂತಹಾ ಸಂದಿಗ್ಧ ಸ್ಥಿತಿಯಲ್ಲಿ ನೀವೊಂದು ದಿನ ಇದ್ದು ಬಿಡಿ ಆಗ ನಿಮಗ ಪತ್ರಕರ್ತನ ಜೀವನ ಅನ್ನುವುದು ಒಂದು ಮುಳ್ಳಿನ ಮೇಲಿನ ನಡಿಗೆ ಅನ್ನುವುದು ಖಂಡಿತಾ ಗೊತ್ತಾಗುತ್ತೆ…
 ಹೌದು  ಪತ್ರಕರ್ತನೂ ಮನುಷ್ಯನೇ ! ಆತನಿಗೂ ಒಂದು ಮನಸ್ಸಿದೆ ಆತನ ಮನಸ್ಥಿತಿಯನ್ನು ನಾವೆಲ್ಲ ಅರಿತು ಅರ್ಥ ಮಾಡಿಕೊಳ್ಳಬೇಕಿದೆ.. ಯಾವುದೋ ಪತ್ರಕರ್ತ ಯಾವುದೋ ಒಂದು ಸುದ್ದಿ ಮಾಡ್ತಾನೆ ಅಂದ್ರೆ ಆತನಿಗಿರುವಂತಹಾ ಒತ್ತಡವನ್ನು ನಾವೆಲ್ಲಾ ಗಮನಿಸಲೇ ಬೇಕಿದೆ. ಈ ಸ್ಪರ್ಧಾತ್ಮಕ ಯುಗದಲ್ಲಿ ಬ್ರೇಕಿಂಗ್ ಗಳ ನಡುವಿನ ಆಟೋಟಗಳಲ್ಲಿ ಪತ್ರಕರ್ತನ ಬಗೆಗಿನ ಕಾಳಜಿಯನ್ನು ಯಾರು ಮಾಡ್ತಾರೆ ಹೇಳಿ?? ಇಂದು ಪತ್ರಿಕಾ ರಂಗದಲ್ಲಿ ದುಡಿಯುತ್ತಿರುವ ಶೇಖಡಾ 40 ರಷ್ಟು ಮಂದಿ ಸಮಯಕ್ಕೆ ಸರಿಯಾಗಿ ಊಟ ಮಾಡಲೂ ಆಗದೇ ಹೊಟ್ಟೆಯುಬ್ಬರದ ಸಮಸ್ಯೆಯಿಂದ ನಲುಗತ್ತಿದ್ದಾರೆ. ಇನ್ನು ಮೆಟ್ರೋ ಸಿಟಿಗಳಲ್ಲಿ ವರದಿಗೆ ತೆರಳಿದ ಎಷ್ಟೋ ವರದಿಗಾರರು ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದ್ರೆ ಅವರೆಲ್ಲರ ಬಗ್ಗೆ ಯೋಚಿಸಲು ಯಾರಿದ್ದಾರೆ? ನಮ್ಮ ನಿಮ್ಮೆಲ್ಲರಿಗೂ ಇರುವಂತೆ ಪತ್ರಕರ್ತನಿಗೂ ಆತನದ್ದೇ ಆದ ಕುಟುಂಬವಿದೆ ಆದ್ರೆ ಎಷ್ಟು ಪತ್ರಕರ್ತ ತನ್ನ ಕುಟುಂಬದೊಂದಿಗೆ ಸಮಯ ಕಳೆಯುತ್ತಾನೆ ಯಾರಿಗಾದರೂ ಗೊತ್ತಾ?? ಸಮಯ ರಾತ್ರಿ 12 ಅಂತಿಲ್ಲ ಬೆಳಗ್ಗೆ 01 ಅಂತಿಲ್ಲಾ… ಸುದ್ದಿ ಇದ್ದಲ್ಲಿಗೆ ಓಡಿ ಹೋಗಲೇ ಬೇಕು… ನಡುವೆ ಈ ವರದಿಗಾರ ಸತ್ತರೂ ಕೇಳುವವರಿಲ್ಲ…
ಏನೋ ಹುಮ್ಮಸ್ಸಿನಲ್ಲಿ ನಾನು ಪತ್ರಕರ್ತನಾಗುತ್ತೇನೆ , ಪತ್ರಕರ್ತನಾಗಬೇಕು ಎಂದು ಬಂದ ಅದೆಷ್ಟೋ  ಆಕಾಂಕ್ಷಿಗಳು ಸರಿಯಾದ ಸಮಯಕ್ಕೆ ಸಂಬಳ ಸಿಗದೇ ಬೆಂಗಳೂರಿನ ರಸ್ತೆ ಬದಿಯಲ್ಲಿ ಮಲಗಿದ್ದ ಬಗ್ಗೆ ಯಾರೂ ಮಾತನಾಡುವುದಿಲ್ಲ… ಸಂಬಳ ಸಿಗದೇ ಇದ್ದಾಗ ಗೆಳೆಯರ ಬಳಿಯಲ್ಲಿ ಸಾಲ ಮಾಡಿಕೊಂಡು ಅದನ್ನು ತೀರಿಸಲಾಗದೇ ಇದ್ದ ಬಗೆಯೂ ಯಾರಿಗೂ ತಿಳಿದಿಲ್ಲ.. ಎಲ್ಲರ ಕಣ್ಣಿಗೆ ಕಾಣುವುದು ಒಂದೇ ದೃಶ್ಯ ಹೇಳುವುದು ಒಂದೇ ಮಾತು !!!! ಬ್ರೇಕಿಂಗ್​ ನ್ಯೂಸ್ !!!
ಪತ್ರಿಕೋದ್ಯಮವನ್ನು ಸಾಗಾಸರಾಗವಾಗಿ ದೂಷಿಸುವ ಸಾಮಾಜಿಕ ಜಾಲತಾಣದ ಕೆಲವು ಅತೃಪ್ತ ಆತ್ಮಗಳೇ ನಿಮ್ಮಲ್ಲಿ ಒಂದು ಪ್ರಶ್ನೆಯಿದೆ… ಇತ್ತೀಚೆಗೆ ಮಂಗಳೂರಿನಲ್ಲಿ ಡೆಂಘಿ ಜ್ವರ ಮಿತಿ ಮೀರಿದ ಬಗ್ಗೆ ಮತ್ತು ಆ ಬಗ್ಗೆ ಜನಪ್ರತಿನಿಧಿಗಳ ಗಮನ ಸೆಳೆಯಲು ಹೋದ ಖಾಸಗಿ ವಾಹಿನಿಯೊಂದರ ವರದಿಗಾರ ನಾಗೇಶ್​ ಮೃತಪಟ್ಟವರ ಬಗ್ಗೆ ಎಷ್ಟು ಜನರಿಗೆ ತಿಳಿದಿದೆ ಸ್ವಾಮಿ?? ಇನ್ನು ಅದೇ ಸಂದರ್ಭದಲ್ಲಿ ಜ್ವರಕ್ಕೆ ತುತ್ತಾದ ಪ್ರಣಾಮ್ ಒಂದು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿದ್ದದ್ದು ಯಾರಿಗೆ ತಿಳಿದಿದೆ??? ನೋ ವೇ ಛಾನ್ಸೇ ಇಲ್ಲ ಯಾರಿಗೂ ನೆನಪಿರಲು ಸಾಧ್ಯವೇ ಇಲ್ಲ…. ಯಾಕಂದ್ರೆ ಅವರೆಲ್ಲ ತೆರೆಮರೆಯ ಹೀರೋಗಳು ಅಷ್ಟೇ !!
ಕೊನೇ ಮಾತು : ವಾಹಿನಿಗಳ ಬಗ್ಗೆ ಬೈಯುವವರು ಒಂದು ಬಾರಿ ಯೋಚಿಸಿ, ಒಂದು ವಾಹಿನಿಯನ್ನು ನಂಬಿಕೊಂಡು ನೂರಾರು ಕುಟುಂಬಗಳು ಬದುಕು ಕಟ್ಟಿಕೊಂಡಿರುತ್ತವೆ.. ಆ ನೂರಾರು ಕುಟುಂಬಗಳ ಸಂಬಳ ಬರಬೇಕಾದರೆ ಟಿ.ಆರ್​.ಪಿ ಅಗತ್ಯ.. ಟಿ.ಆರ್​.ಪಿ ಇದ್ರೆ ಬ್ಯುಸಿನೆಸ್​ ಇಲ್ಲಾಂದ್ರೆ ಬ್ಯುಸಿನೆಸ್​ ಇಲ್ಲ… ಆ ಟಿ.ಆರ್​.ಪಿ.ಗೋಸ್ಕರ ನಾವು ಕೆಲವು ನಾಟಕ ಮಾಡಲೇ ಬೇಕು !! ನೆನಪಿಡಿ… ಯಾವುದೇ ವಾಹಿನಿ ತನ್ನ ವೃತ್ತಿಧರ್ಮವನ್ನು ಎಂದಿಗೂ ಮರೆತಿಲ್ಲ.. ಅಷ್ಟೇ !!! ನಮಗೂ ನಿಯತ್ತಿದೆ ನಮ್ಮಲ್ಲೂ ಮಾನವೀಯತೆ ಇದೆ ಅಷ್ಟೇ.…



Sunday, 5 January 2020

ಮನ್ಸಿಂದ ಯಾರೂನೂ ಕೆಟ್ಟೋರಲ್ಲ…


ಮನ್ಸಿಂದ ಯಾರೂನೂ ಕೆಟ್ಟೋರಲ್ಲ… ಆದ್ರೆ ಕೆಲವೊಂದು ಸರಿ ಅತ್ಯಂತ ಆಪ್ತರು ಮಾಡುವಂತಹಾ ಕೆಲಸಗಳು ಕುಡಾ ನಮಗೆ ನೋವನ್ನು ತಂದೊಡ್ಡಬಹುದಲ್ವಾ? ಒಂದು ಮಾತು ನಾವ್ಯಾವತ್ತೂ ಹೇಳೋದಿದೆ… Expectation Hurts ! ಆದ್ರೆ ಕೆಲವು ಸಾರಿ ನಾವು  ಯೋಚಿಸಿಯೂ ಇರದ ವಿಷಯಗಳು ಮನಸ್ಸಿಗೆ ತುಂಬಾ ನೋವನ್ನೂ ನೀಡಿದ್ದಿದೆ. ನೀವು ಕಷ್ಟಪಟ್ಟು ಮಾಡಿದ ವಿಚಾರಗಳಿಗೆ ಬೆಲೆ ಸಿಗದಿದ್ದಾಗ..  ಆಗುವ ನೋವಿದ್ಯಲ್ಲಾ…  ಅದು ವರ್ಣಿಸಲಸಾಧ್ಯವೇನೋ..  ಒಬ್ಬ ಪ್ರಿಯಕರನಿಗೆ ತನ್ನ ಪ್ರೇಯಸಿಯ ಮೇಲೆ ಎಷ್ಟೊಂದು ಪ್ರೀತಿಯಿರುತ್ತದೆ ಹಾಗೆಯೇ ಆಕೆಯಿಂದ ಆತನೂ ಬಯಸುವುದು ಒಂದೆರಡು ಖುಷಿಯ ಸಾಲುಗಳಷ್ಟೇ… ಪ್ರೇಯಸಿ ಹೇಳಿದ ಕೆಲಸ ಮಾಡಲು ತನ್ನೆಲ್ಲಾ ಕೆಲಸಗಳನ್ನು ಬದಿಗಿಟ್ಟು 3 ದಿನಗಳ ಕಾಲ ಕಷ್ಟದಿಂದ ಮಾಡಿದ ಕೆಲಸಕ್ಕೆ ಫ್ರತಿಫಲ ಸಿಗದಿದ್ದರೆ? ಹೇಗಾಗಬೇಡ ? ಇದಕ್ಕಂತಲೂ ನೋವಿನ ಸಂಗತಿ ಕೆಲವೊಂದಿದಎ.. ಅದೇನು ಗೊತ್ತಾ… ಪ್ರೇಯಸಿಗೆ ತನ್ನ ಗೆಳತಿಯ ನೋವು ಅರ್ಥವಾದಂತೆ ತನ್ನಿನಿಯನ ನೋವು ಅರ್ಥವಾಗದಿದ್ದಾಗ ಆಗುವ ತೊಳಲಾಟದ ಮನಸ್ಥಿತಿಯನ್ನು ವರ್ಣಿಸುವವರಾರು??  ಕೆಲವೊಂದು ಬಾರಿ ಪ್ರತಿಯೊಂದು ಮೌನದಲ್ಲೂ ಒಂದು ನೋವಿರುತ್ತದೆ.. ಆ ನೊವಿನಲ್ಲೂ ನಸುಗೋಪವಿದೆ.. ಆ ಕೋಪಕ್ಕೆ ಕಾರಣ ಮಾತ್ರ ನಿಗೂಢ ರಹಸ್ಯದಂತೆ ಭಾಸವಾಗುತ್ತದೆ. ಆ ನಿಗೂಢ ರಹಸ್ಯವನ್ನು ಬೇಧಿಸಲೇ ಬೇಕಿದೆ.. ಮೌನ ಮುರಿಯಲೇ ಅಥವಾ ಇನ್ನೂ ಮೌನಿಯಾಗಲೇ??? .. 


ಮೌನವೇ ಹಿತ.. ಮಾತು ಮನೆ ಕೆಡಿಸಬಾರದಲ್ಲ…

ಕೊನೇ ಮಾತು…
ಮನ್ಸಿಂದ ಯಾರೂನೂ ಕೆಟ್ಟೋರಲ್ಲ…
ಒಂದ್ ಮಾತು ಬತ್ತದೆ ಒಂದ್ ಮಾತು ಹೊಯ್ತದೆ..
ನುಂಗ್​ಕೊಂಡು ನಡೆಯೋನು ಮನುಜ ತಾನೆ..

ಇದ್ದಿದ್ದು ಇರ್ತದೆ ಹೋಗಿದ್ದು ಹೊಯ್ತದೆ
ಮನುಷ್ಯತ್ವ ಮರೆತೋದ್ರೆ ತಪ್ಪು ಸಾನೆ
ಅನುಸರ್ಸ್ಕೊಂಡ್​ ಹೋದ್ರೆ ಎಲ್ಲಾ ಮಕ್ಳಾಟಾನೇ !
ಮನ್ಸಿಂದ ಯಾರೂನೂ ಕೆಟ್ಟೋರಲ್ಲ…
ಮನ್ಸಿಂದ ಯಾರೂನೂ ಕೆಟ್ಟೋರಲ್ಲ
ಕಷ್ಟ ಸುಖ ಎರಡೂ ಮನುಷ್ಯಂಗ್​ ಬರದೇ ಏನು
ಇಷ್ಟುದ್ದ ಇರೋ ಮರಕ್ ಬತ್ತದಾ?
ನೋವು ನಲಿವು ಪಟ್ಟು ಮಯ್ಯ ಮರೆತು ನಿಂತ್ರೆ
ಕಾಲ ಒಂದು ಹೆಜ್ಜೆನ ತಪ್ತದಾ?

ಕೇಳಾರ ಕೇಳಿ, ಬಿಟ್ಟಾರ ಬಿಡಿ
ಬದುಕೊಂದು ಬಳಪ ಪ್ರೀತಿನೇ ತಿದ್ದಿ
ಗಳಿಸ್ಕೊಂಡು ಹೋಗೋದು ಸಂಬಂಧನೇ…
ಗಳಿಸ್ಕೊಂಡು ಹೋಗೋಕಾಗೋದು ಸಂಬಂಧನೇ
ಅನುಸರಿಸ್ಕೊಂಡು ಹೋಗು ಎಲ್ಲ ಕ್ಷಣಗಳನ್ನೇ….



ಪ್ರೀತಿ.. ಪ್ರೇಮ... ಮನೊಕಾಮನೆ..... ಒಂದು ಜೋಡಿಯ ಸುತ್ತ...!

ಅನೇಕ ವರ್ಷಗಳ ಕಾಲ ಬರವಣಿಗೆಯಿಂದ ವಿಮುಖನಾಗಿದ್ದೆ ಆದ್ರೆ ಈಗ ಅದ್ಯಾಕೋ ಬರೆಯಬೇಕು ಅನ್ನಿಸಿತ್ತು ಅದೊಂದು ಕಥೆ... ನನ್ನ ಕಥೆಯಲ್ಲ.. ನಾ ಕೇಳಿದ ಪ್ರೀತಿಯ ಕಥೆ... ...