ವೇಶ್ಯಾವಾಟಿಕೆ ಈ ಹೆಸರು ಕೇಳಿದೊಡನೆ ಭಾರತೀಯ ಪ್ರಜ್ಞಾವಂತ ಸಮಾಜ ಏನೋ ಒಂದು ರೀತಿಯ ಅಸಹ್ಯದಂತೆ ನೋಡುವಂತಾಗಿದೇ ಆದರೆ ಈ ವೇಶ್ಯಾಜಗತ್ತಿನ ಆಳ ಅರಿವಿನ ಕುರಿತಾಗಿ ಅಧ್ಯಯನ ಮಾಡ ಹೊರಟಾಗ ಇದೇ ಪ್ರಜ್ಞಾವಂತ ಎಂದು ಕರೆಸಿಕೊಳ್ಳುವ ಸಮಾಜ ಬೆತ್ತಲಾಗುವುದಂತೂ ಸುಳ್ಳಲ್ಲ…
ವೇಶ್ಯಾಜಗತ್ತಿನ ಕರಾಳ ಜಗತ್ತನ್ನು ಹೊರಗೆಡವುವ ಮೊದಲು ನಾನು ನನಗಾದ ಕೆಲ ಅನುಭವವನ್ನು ಬಿಚ್ಚಿಡುವೆ ಕೇಳಿ...
ಅದು ಒಂದು ರಾತ್ರಿ ಬೆಂಗಳೂರೆಂಬ ಮಹಾನಗರವನ್ನು ಬಿಟ್ಟ ನಾನು ಮಂಗಳೂರಿಗೆ ಹೊರಟಿದ್ದೆ… ಮೆಜಿಸ್ಟಿಕ್ ಬಿ.ಎಂ.ಟಿ.ಸಿ. ಬಸ್ಸಿನಿಂದಿಳಿದ ನಾನು ಸೀದಾ ಫ್ಲೈ ಓವರ್ ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ತಲುಪುವ ತವಕದಲ್ಲಿದ್ದೆ. ಅದಾಗಲೇ ನನಗೆ ಒಂದು ಕರೆ ಕೇಳಿದ್ದು.. “ ಸರ್ ಬರ್ತೀರಾ”...... ಈ ಮಾತು ಕೇಳಿದ್ದೇ ತಡ ಒಂದು ಕ್ಷಣ ನಾನು ತತ್ತರಿಸಿ ಹೋಗಿದ್ದೆ.. ಬೆಚ್ಚಿ ಬಿದ್ದು ಬೆವೆತವನಂತಾಗಿ ಅಲ್ಲಿಂದ ಕಾಲ್ಕಿತ್ತೆ...
ಆದರೆ ನನ್ನ ಮನ ತಡೆಯಲಿಲ್ಲ.. ಈ ವೇಶ್ಯಾಜಗತ್ತಿನ ಕುರಿತಾಗಿ ಸ್ವಲ್ಪ ಸ್ವಲ್ಪವೇ ಅಧ್ಯಯನ ನಡೆಸಬೇಕೆಂದು ತೀರ್ಮಾನಿಸಿದೆ. ಅದನ್ನು ಅಧ್ಯಯನ ಮಾಡ ಹೊರಟಾಗ ದೊರೆತ ಕೆಲ ಮಾಹಿತಿಗಳು ನನ್ನನ್ನೇ ಬೆಚ್ಚಿ ಬೀಳಿಸಿತ್ತು... ಕಾಸಿಗಾಗಿ ಸೆರಗು ಬಿಚ್ಚುವವರೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಮುಗ್ಧ ಮುಖಗಳ ನೈಜ ಜೀವನ ಕಣ್ಣೀರು ತರಿಸುವಂತಿತ್ತು.. ಜೊತೆಗೆ ಸಮಾಜವಾದಿಗಳ ನೈಜ ಮುಖವಾಡ ಕಳಚಿ ಬಿದ್ದಿತ್ತು.. ಜಗತ್ತಿನಲ್ಲಿ ಕಾಣುವುದು ಎಲ್ಲಾ ಸತ್ಯವಲ್ಲ ಎಂಬುದರ ಪ್ರಸ್ತುತತೆ ಅರಿವಾಗಿತ್ತು...
ವೇಶ್ಯೆ ಎಂಬುವುದು ಕೇವಲ ಭೋಗದ ವಸ್ತುವಲ್ಲ ಆಕೆಗೂ ಒಂದು ನಿರ್ಮಲವಾದ ಮನಸ್ಸಿದೆ.. ಆಕೆಯ ಮನಸ್ಸಿನಲ್ಲೂ ಆಸೆಗಳಿವೆ ಕಣ್ಣುಗಳಲ್ಲಿ ನಾಳೆಯ ಕನಸುಗಳಿವೆ ನಮ್ಮಂತೆ ಆಕೆಯ ದೇಹದಲ್ಲೂ ರಕ್ತ ಹರಿಯುತ್ತಿದೆ ಎಂಬುವುದನ್ನು ನಾವು ಮರೆಮಾಚುವಂತಿಲ್ಲ..
ಹೌದು ವೇಶ್ಯಾವಾಟಿಕೆಯ ಕುರಿತಾಗಿ ನಾನು ವಿಮರ್ಶೆ ಮಾಡ ಹೊರಟಾಗ ಅಚ್ಚರಿಯ ಜೊತೆಗೆ ಒಂದು ಬೇಸರವೂ ಕಾದಿತ್ತು , ಬೆಂಗಳೂರಿನ ಬೀದಿಯೋದರಲ್ಲಿ ನಾನು ನಡೆದು ಹೋಗುತ್ತಿದ್ದಾಗ ಅಕಸ್ಮಾತಾಗಿ ಸಿಕ್ಕಿದ , ಮಹಿಳೆಯೊಬ್ಬಳ ಬಳಿಯಲ್ಲಿ ಮಾತನಾಡಿದೆ. ಆಕೆ ಕೆಲ ಚಿಕ್ಕ ಪುಟ್ಟ ಮಾಹಿತಿಗಳನಷ್ಟೇ ನೀಡಿದಳು.. ಆಕೆ ನೀಡಿದ ಮಾಹಿತಿಯನ್ನು ಲೇಖನದ ಮೂಲಕ ಭಟ್ಟಿ ಇಳಿಸುವ ಕೆಲಸವನ್ನಷ್ಟೇ ನಾನು ಮಾಡಿದ್ದೇನೆ.
ಬೆಂಗಳೂರಿನ ಹಲವಾರು ಕಡೆ ವೇಶ್ಯಾಗೃಹಗಳಿದೆಯಂತೆ ಅಲ್ಲಿ ಏನಿಲ್ಲವೆಂದರೂ ಸರಿಸುಮಾರು 10 ರಿಂದ 15 ಮಂದಿ ಮಹಿಳೆಯರು ಈ ದಂಧೆಯಲ್ಲಿ ತೊಡಗಿದ್ದಾರಂತೆ ಆದರೆ ಈ ಧಂಧೆಯಲ್ಲಿ ತೊಡಗಿದ ಶೇ.60 ರಷ್ಟು ಮಂದಿ ವಿಚಾರದ ಪ್ರಸ್ತುತತೆಯ ಅರಿವಿಲ್ಲದೇ ಈ ದಂಧೆಗಿಳಿದವರು. ಕೇವಲ ತಮ್ಮ ಕುಟುಂಬ ಮುನ್ನಡೆಸುವ ಕಾಯಕಕ್ಕಾಗಿ ಬೇಕಾದಷ್ಟು ಕಾಸು ದೊರೆಯದೇ ಹೋದಾಗ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ವೇಶ್ಯಾವೃತ್ತಿಗಿಳಿದವರು ಒಂದೆಡೆಯಾದರೆ ಇನ್ನೂ ಯಾರದ್ದೋ ಮಾತು ಕೇಳಿ ಬೆಂಗಳೂರೆಂಬ ಮಹಾನಗರದೊಳಗೆ ಕಾಲಿಟ್ಟು ಹಿಂದಿರುಗಿ ತಮ್ಮೂರಿಗೆ ಹೊಗಲಾರದೇ ಇತ್ತ ಸರಿಯಾದ ಕೆಲಸವೂ ಇಲ್ಲದೇ ಅಲೆದಾಡುವಂತಹಾ ಪರಿಸ್ಥಿತಿ ಇವೆಲ್ಲಾ ಮುಖ್ಯ ಕಾರಣವೆಂದು ನಿಮಗನಿಸದೇ ಇರಬಹುದು ಆದರೆ ಈ ಹಸಿವೆಂಬ ರಾಕ್ಷಸ ಇದ್ದಾನಲ್ಲ ಆತನಷ್ಟು ಕ್ರೂರಿ ಯಾರೂ ಇಲ್ಲ ಎನ್ನುವುದು ನನ್ನ ಭಾವನೆ.. ಕೈಯಲ್ಲಿ ಕಾಸಿಲ್ಲ ಹೊಟ್ಟೆಗೆ ಹಿಟ್ಟಿಲ್ಲ ಇಂತಹಾ ಸಂದರ್ಭದಲ್ಲಿ ಕೆಲಸವೂ ಇಲ್ಲದಿದ್ದರೆ ಇಂತಹಾ ದಂಧೆಗಿಳಿಯದೆ ಬೇರೆ ವಿಧಿಯೇ ಇಲ್ಲ ಎಂದು ಹೇಳುತ್ತಾರೆ ಅವರು.. ಅವರ ಕಥೆಗಳನ್ನು ಕೇಳಿದಾಗ ಆದ ನೋವು ಅಷ್ಟಿಷ್ಟಲ್ಲ.. ಅವರು ಮುಂದುವರೆದು ಹೇಳುತ್ತಾರೆ, ಸಮಾಜದಲ್ಲಿ ಕೆಲ ಗಣ್ಯ ವ್ಯಕ್ತಿಗಳೆಂದು ಕರೆಸಿಕೊಂಡವರು ಕೆಲವೊಮ್ಮೆ ವೇಶ್ಯಾಗೃಹಗಳಿಗೆ ಬರುವುದಿದೆಯಂತೆ ಅದೂ ಕುಡಿದು ಬಂದು ತಮ್ಮ ಕಾಮತೃಷೆ ತೀರಿಸಿಕೊಳ್ಳುವುದಲ್ಲದೇ ತಮ್ಮ ವಿಕೃತತೆಯನ್ನು ತೀರಿಸಿಕೊಳ್ಳುವುದಿದೆಯಲ್ಲ ಅದು ಇನ್ನೂ ವಿಚಿತ್ರ.. ಸಿಗರೇಟಿನಿಂದ ಸುಡುವುದು, ಹಲ್ಲುಗಳಿಂದ ಕಚ್ಚಿ ಗಾಯಗೊಳಿಸುವಂತಹಾ ಸನ್ನಿವೇಷಗಳೂ ಇವೆಯಂತೆ , ಅದೂ ಹೇಗೆ ಅಂತೀರಾ... ಕೇಳಿದರೆ ನೀವೇ ಬೆಚ್ಚಿ ಬೀಳ್ತೀರಾ..
ಸಿಗರೇಟಿನಿಂದ ಕೈಗಳನ್ನು ಸುಡುವುದು ಮಾತ್ರ ನೀವು ಇಲ್ಲಿಯವರೆಗೆ ಕೇಳಿರಬಹುದು ಆದರೆ ಕೆಲ ವಿಕೃತ ಕಾಮದ ಪುಣ್ಯಾತ್ಮರಿದ್ದಾರಲ್ಲ ಅವರು ಸಿಗರೇಟುಗಳಿಂದ ಹೆಣ್ಣಿನ ಮರ್ಮಾಂಗದ ಬಳಿ , ಮೊಲೆಗಳ ಮೇಲೆ, ಹಾಗೂ ಹೊಟ್ಟೆಯ ಮೇಲೆಲ್ಲಾ ಸುಟ್ಟು ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಾರಂತೆ... ಮಾತ್ರವಲ್ಲ ಈ ಗಾಯದ ಮೇಲೆ ಮತ್ತೆ ಕಚ್ಚಿ ಇನ್ನಷ್ಟು ನೋವು ನೀಡುವಗ ತಡೆದುಕೊಳ್ಳದೇ ಬೇರೆ ವಿಧಿಯೇ ಇಲ್ಲವಂತೆ..
ಇವೆಲ್ಲವನ್ನೂ ತಡೆದುಕೊಂಡರೆ ಸಾಕು ಎಂಬುವುದು ನಿಮ್ಮ ವಾದವೇ ?? ಹಾಗಾದರೆ ನಿಮ್ಮ ನಿಲುವು ಸುಳ್ಳು .. ಇತ್ತ ಗಿರಾಕಿಗಳ ಕಾಟ ಮಾತ್ರವಲ್ಲ ಕೆಲ ಪೋಲಿ ಸರ ಕಾಟ ಬೇರೆ.. ಅವರ ಬಾಯಿಂದ ಕೇಳಿದ ಮಾತುಗಳನ್ನು ಕೇಳಿ ನನ್ನ ಮನಸ್ಸಿನಲ್ಲಿ ನನಗರಿವಿಲ್ಲದಂತೆಯೇ ಬೇಸರ ಛಾಯೆ ಹುಟ್ಟಿ ಕಣ್ಣಾಲಿಗಳಿಂದ ಒಂದೆರಡು ಹನಿಗಳು ಧರೆ ಸೇರಿದವು...
ಇವಿಷ್ಟು ಕೇವಲ ವೇಶ್ಯೆ ಎಂದು ಕರೆಯಲ್ಪಡುವ ಮಾತೆಯ ನೋವಿನ ಟ್ರೈಲರ್ ಅಷ್ಟೇ ಇನ್ನೂ ನಿಮಗೆ ವೇಶ್ಯೆಯರ ಜೀವನದ ಬಗ್ಗೆ ತಿಳಿದುಕೊಳ್ಳಬೇಕಾದರೆ ನನಗೆ ಹೇಳಿ ನಾನು ಇನ್ನೂ ಬರೆಯುತ್ತೇನೆ.. ಇನ್ನಷ್ಟು ವಿಚಾರ ತಿಳಿಸುವ ಪ್ರಯತ್ನ ಮಾಡುತ್ತೇನೆ..
ಇಂತಿ
ಪ್ರೀತಿಯಿಂದ
ಅಕ್ಷಯ್ ಜಿ ಭಟ್
ವೇಶ್ಯಾಜಗತ್ತಿನ ಕರಾಳ ಜಗತ್ತನ್ನು ಹೊರಗೆಡವುವ ಮೊದಲು ನಾನು ನನಗಾದ ಕೆಲ ಅನುಭವವನ್ನು ಬಿಚ್ಚಿಡುವೆ ಕೇಳಿ...
ಅದು ಒಂದು ರಾತ್ರಿ ಬೆಂಗಳೂರೆಂಬ ಮಹಾನಗರವನ್ನು ಬಿಟ್ಟ ನಾನು ಮಂಗಳೂರಿಗೆ ಹೊರಟಿದ್ದೆ… ಮೆಜಿಸ್ಟಿಕ್ ಬಿ.ಎಂ.ಟಿ.ಸಿ. ಬಸ್ಸಿನಿಂದಿಳಿದ ನಾನು ಸೀದಾ ಫ್ಲೈ ಓವರ್ ಮೂಲಕ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣವನ್ನು ತಲುಪುವ ತವಕದಲ್ಲಿದ್ದೆ. ಅದಾಗಲೇ ನನಗೆ ಒಂದು ಕರೆ ಕೇಳಿದ್ದು.. “ ಸರ್ ಬರ್ತೀರಾ”...... ಈ ಮಾತು ಕೇಳಿದ್ದೇ ತಡ ಒಂದು ಕ್ಷಣ ನಾನು ತತ್ತರಿಸಿ ಹೋಗಿದ್ದೆ.. ಬೆಚ್ಚಿ ಬಿದ್ದು ಬೆವೆತವನಂತಾಗಿ ಅಲ್ಲಿಂದ ಕಾಲ್ಕಿತ್ತೆ...
ಆದರೆ ನನ್ನ ಮನ ತಡೆಯಲಿಲ್ಲ.. ಈ ವೇಶ್ಯಾಜಗತ್ತಿನ ಕುರಿತಾಗಿ ಸ್ವಲ್ಪ ಸ್ವಲ್ಪವೇ ಅಧ್ಯಯನ ನಡೆಸಬೇಕೆಂದು ತೀರ್ಮಾನಿಸಿದೆ. ಅದನ್ನು ಅಧ್ಯಯನ ಮಾಡ ಹೊರಟಾಗ ದೊರೆತ ಕೆಲ ಮಾಹಿತಿಗಳು ನನ್ನನ್ನೇ ಬೆಚ್ಚಿ ಬೀಳಿಸಿತ್ತು... ಕಾಸಿಗಾಗಿ ಸೆರಗು ಬಿಚ್ಚುವವರೆಂಬ ಹಣೆಪಟ್ಟಿ ಕಟ್ಟಿಕೊಂಡಿದ್ದ ಮುಗ್ಧ ಮುಖಗಳ ನೈಜ ಜೀವನ ಕಣ್ಣೀರು ತರಿಸುವಂತಿತ್ತು.. ಜೊತೆಗೆ ಸಮಾಜವಾದಿಗಳ ನೈಜ ಮುಖವಾಡ ಕಳಚಿ ಬಿದ್ದಿತ್ತು.. ಜಗತ್ತಿನಲ್ಲಿ ಕಾಣುವುದು ಎಲ್ಲಾ ಸತ್ಯವಲ್ಲ ಎಂಬುದರ ಪ್ರಸ್ತುತತೆ ಅರಿವಾಗಿತ್ತು...
ವೇಶ್ಯೆ ಎಂಬುವುದು ಕೇವಲ ಭೋಗದ ವಸ್ತುವಲ್ಲ ಆಕೆಗೂ ಒಂದು ನಿರ್ಮಲವಾದ ಮನಸ್ಸಿದೆ.. ಆಕೆಯ ಮನಸ್ಸಿನಲ್ಲೂ ಆಸೆಗಳಿವೆ ಕಣ್ಣುಗಳಲ್ಲಿ ನಾಳೆಯ ಕನಸುಗಳಿವೆ ನಮ್ಮಂತೆ ಆಕೆಯ ದೇಹದಲ್ಲೂ ರಕ್ತ ಹರಿಯುತ್ತಿದೆ ಎಂಬುವುದನ್ನು ನಾವು ಮರೆಮಾಚುವಂತಿಲ್ಲ..
ಹೌದು ವೇಶ್ಯಾವಾಟಿಕೆಯ ಕುರಿತಾಗಿ ನಾನು ವಿಮರ್ಶೆ ಮಾಡ ಹೊರಟಾಗ ಅಚ್ಚರಿಯ ಜೊತೆಗೆ ಒಂದು ಬೇಸರವೂ ಕಾದಿತ್ತು , ಬೆಂಗಳೂರಿನ ಬೀದಿಯೋದರಲ್ಲಿ ನಾನು ನಡೆದು ಹೋಗುತ್ತಿದ್ದಾಗ ಅಕಸ್ಮಾತಾಗಿ ಸಿಕ್ಕಿದ , ಮಹಿಳೆಯೊಬ್ಬಳ ಬಳಿಯಲ್ಲಿ ಮಾತನಾಡಿದೆ. ಆಕೆ ಕೆಲ ಚಿಕ್ಕ ಪುಟ್ಟ ಮಾಹಿತಿಗಳನಷ್ಟೇ ನೀಡಿದಳು.. ಆಕೆ ನೀಡಿದ ಮಾಹಿತಿಯನ್ನು ಲೇಖನದ ಮೂಲಕ ಭಟ್ಟಿ ಇಳಿಸುವ ಕೆಲಸವನ್ನಷ್ಟೇ ನಾನು ಮಾಡಿದ್ದೇನೆ.
ಬೆಂಗಳೂರಿನ ಹಲವಾರು ಕಡೆ ವೇಶ್ಯಾಗೃಹಗಳಿದೆಯಂತೆ ಅಲ್ಲಿ ಏನಿಲ್ಲವೆಂದರೂ ಸರಿಸುಮಾರು 10 ರಿಂದ 15 ಮಂದಿ ಮಹಿಳೆಯರು ಈ ದಂಧೆಯಲ್ಲಿ ತೊಡಗಿದ್ದಾರಂತೆ ಆದರೆ ಈ ಧಂಧೆಯಲ್ಲಿ ತೊಡಗಿದ ಶೇ.60 ರಷ್ಟು ಮಂದಿ ವಿಚಾರದ ಪ್ರಸ್ತುತತೆಯ ಅರಿವಿಲ್ಲದೇ ಈ ದಂಧೆಗಿಳಿದವರು. ಕೇವಲ ತಮ್ಮ ಕುಟುಂಬ ಮುನ್ನಡೆಸುವ ಕಾಯಕಕ್ಕಾಗಿ ಬೇಕಾದಷ್ಟು ಕಾಸು ದೊರೆಯದೇ ಹೋದಾಗ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ವೇಶ್ಯಾವೃತ್ತಿಗಿಳಿದವರು ಒಂದೆಡೆಯಾದರೆ ಇನ್ನೂ ಯಾರದ್ದೋ ಮಾತು ಕೇಳಿ ಬೆಂಗಳೂರೆಂಬ ಮಹಾನಗರದೊಳಗೆ ಕಾಲಿಟ್ಟು ಹಿಂದಿರುಗಿ ತಮ್ಮೂರಿಗೆ ಹೊಗಲಾರದೇ ಇತ್ತ ಸರಿಯಾದ ಕೆಲಸವೂ ಇಲ್ಲದೇ ಅಲೆದಾಡುವಂತಹಾ ಪರಿಸ್ಥಿತಿ ಇವೆಲ್ಲಾ ಮುಖ್ಯ ಕಾರಣವೆಂದು ನಿಮಗನಿಸದೇ ಇರಬಹುದು ಆದರೆ ಈ ಹಸಿವೆಂಬ ರಾಕ್ಷಸ ಇದ್ದಾನಲ್ಲ ಆತನಷ್ಟು ಕ್ರೂರಿ ಯಾರೂ ಇಲ್ಲ ಎನ್ನುವುದು ನನ್ನ ಭಾವನೆ.. ಕೈಯಲ್ಲಿ ಕಾಸಿಲ್ಲ ಹೊಟ್ಟೆಗೆ ಹಿಟ್ಟಿಲ್ಲ ಇಂತಹಾ ಸಂದರ್ಭದಲ್ಲಿ ಕೆಲಸವೂ ಇಲ್ಲದಿದ್ದರೆ ಇಂತಹಾ ದಂಧೆಗಿಳಿಯದೆ ಬೇರೆ ವಿಧಿಯೇ ಇಲ್ಲ ಎಂದು ಹೇಳುತ್ತಾರೆ ಅವರು.. ಅವರ ಕಥೆಗಳನ್ನು ಕೇಳಿದಾಗ ಆದ ನೋವು ಅಷ್ಟಿಷ್ಟಲ್ಲ.. ಅವರು ಮುಂದುವರೆದು ಹೇಳುತ್ತಾರೆ, ಸಮಾಜದಲ್ಲಿ ಕೆಲ ಗಣ್ಯ ವ್ಯಕ್ತಿಗಳೆಂದು ಕರೆಸಿಕೊಂಡವರು ಕೆಲವೊಮ್ಮೆ ವೇಶ್ಯಾಗೃಹಗಳಿಗೆ ಬರುವುದಿದೆಯಂತೆ ಅದೂ ಕುಡಿದು ಬಂದು ತಮ್ಮ ಕಾಮತೃಷೆ ತೀರಿಸಿಕೊಳ್ಳುವುದಲ್ಲದೇ ತಮ್ಮ ವಿಕೃತತೆಯನ್ನು ತೀರಿಸಿಕೊಳ್ಳುವುದಿದೆಯಲ್ಲ ಅದು ಇನ್ನೂ ವಿಚಿತ್ರ.. ಸಿಗರೇಟಿನಿಂದ ಸುಡುವುದು, ಹಲ್ಲುಗಳಿಂದ ಕಚ್ಚಿ ಗಾಯಗೊಳಿಸುವಂತಹಾ ಸನ್ನಿವೇಷಗಳೂ ಇವೆಯಂತೆ , ಅದೂ ಹೇಗೆ ಅಂತೀರಾ... ಕೇಳಿದರೆ ನೀವೇ ಬೆಚ್ಚಿ ಬೀಳ್ತೀರಾ..
ಸಿಗರೇಟಿನಿಂದ ಕೈಗಳನ್ನು ಸುಡುವುದು ಮಾತ್ರ ನೀವು ಇಲ್ಲಿಯವರೆಗೆ ಕೇಳಿರಬಹುದು ಆದರೆ ಕೆಲ ವಿಕೃತ ಕಾಮದ ಪುಣ್ಯಾತ್ಮರಿದ್ದಾರಲ್ಲ ಅವರು ಸಿಗರೇಟುಗಳಿಂದ ಹೆಣ್ಣಿನ ಮರ್ಮಾಂಗದ ಬಳಿ , ಮೊಲೆಗಳ ಮೇಲೆ, ಹಾಗೂ ಹೊಟ್ಟೆಯ ಮೇಲೆಲ್ಲಾ ಸುಟ್ಟು ತಮ್ಮ ಕಾಮತೃಷೆ ತೀರಿಸಿಕೊಳ್ಳುತ್ತಾರಂತೆ... ಮಾತ್ರವಲ್ಲ ಈ ಗಾಯದ ಮೇಲೆ ಮತ್ತೆ ಕಚ್ಚಿ ಇನ್ನಷ್ಟು ನೋವು ನೀಡುವಗ ತಡೆದುಕೊಳ್ಳದೇ ಬೇರೆ ವಿಧಿಯೇ ಇಲ್ಲವಂತೆ..
ಇವೆಲ್ಲವನ್ನೂ ತಡೆದುಕೊಂಡರೆ ಸಾಕು ಎಂಬುವುದು ನಿಮ್ಮ ವಾದವೇ ?? ಹಾಗಾದರೆ ನಿಮ್ಮ ನಿಲುವು ಸುಳ್ಳು .. ಇತ್ತ ಗಿರಾಕಿಗಳ ಕಾಟ ಮಾತ್ರವಲ್ಲ ಕೆಲ ಪೋಲಿ ಸರ ಕಾಟ ಬೇರೆ.. ಅವರ ಬಾಯಿಂದ ಕೇಳಿದ ಮಾತುಗಳನ್ನು ಕೇಳಿ ನನ್ನ ಮನಸ್ಸಿನಲ್ಲಿ ನನಗರಿವಿಲ್ಲದಂತೆಯೇ ಬೇಸರ ಛಾಯೆ ಹುಟ್ಟಿ ಕಣ್ಣಾಲಿಗಳಿಂದ ಒಂದೆರಡು ಹನಿಗಳು ಧರೆ ಸೇರಿದವು...
ಇವಿಷ್ಟು ಕೇವಲ ವೇಶ್ಯೆ ಎಂದು ಕರೆಯಲ್ಪಡುವ ಮಾತೆಯ ನೋವಿನ ಟ್ರೈಲರ್ ಅಷ್ಟೇ ಇನ್ನೂ ನಿಮಗೆ ವೇಶ್ಯೆಯರ ಜೀವನದ ಬಗ್ಗೆ ತಿಳಿದುಕೊಳ್ಳಬೇಕಾದರೆ ನನಗೆ ಹೇಳಿ ನಾನು ಇನ್ನೂ ಬರೆಯುತ್ತೇನೆ.. ಇನ್ನಷ್ಟು ವಿಚಾರ ತಿಳಿಸುವ ಪ್ರಯತ್ನ ಮಾಡುತ್ತೇನೆ..
ಇಂತಿ
ಪ್ರೀತಿಯಿಂದ
ಅಕ್ಷಯ್ ಜಿ ಭಟ್


